ಪುತ್ತೂರಿಗೆ ಶಾಸಕರಿಲ್ಲ ಅಂತ ಬೇಸರಿಸಬೇಡಿ..ನಾನೇ ನಿಮ್ಮ ಶಾಸಕರ ತರ ನಿಮ್ಮೊಂದಿಗಿರ್ತೇನೆ – ಪುತ್ತೂರಲ್ಲಿ ಕಾರ್ಯಕರ್ತರಿಗೆ ಪೂಂಜ ಭರವಸೆ

0

ಪುತ್ತೂರು: ಇಲ್ಲಿ ಹಿಂದೂ ಕಾರ್ಯಕರ್ತರಿಗೆ ಪೊಲೀಸರಿಂದ ಅಮಾನವೀಯವಾಗಿ ಥಳಿಸಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಾರ್ಯಕರ್ತರನ್ನು ಭೇಟಿಯಾಗಿ ಘಟನೆ ಬಗ್ಗೆ ತಿಳಿದುಕೊಂಡು, ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.
ಈ ವೇಳೆ ಹರೀಶ್ ಪೂಂಜರೊಂದಿಗೆ ಮಾತನಾಡಿದ ಕಾರ್ಯಕರ್ತರು “ನಿಮ್ಮಂತಹ ಶಾಸಕ ಇರುತ್ತಿದ್ದರೇ ಸದಾ ನಾವು ನಿಮ್ಮೊಂದಿಗೆ ಇರುತ್ತಿದ್ದೆವು.ಇವರು ಜಾತಿಯನ್ನು ನೋಡಿ ನಾವ್ಯಾಕೆ ಮತ ಹಾಕಬೇಕು. ನಿಮ್ಮಂತವರು ಇರುತ್ತಿದ್ದರೆ ನಾವು ಇಡೀ ಪುತ್ತೂರೇ ಇರುತ್ತಿತ್ತು.ಆದರೆ ಇಂತಹ ನಾ**ಗಳು ಇರಬಾರದು” ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾರ್ಯಕರ್ತರೊಂದಿಗೆ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ “ಬೆಳ್ತಂಗಡಿ ಶಾಸಕನಾಗಿ ಪುತ್ತೂರಿನವರಿಗೆ ಶಾಸಕನಿಲ್ಲ ಅನ್ನುವ ಬೇಸರ ಮಾಡಬೇಡಿ.ನಾನು ನಿಮ್ಮ ಶಾಸಕನ ತರ ನಿಮ್ಮೊಂದಿಗೆ ಬರುತ್ತೇನೆ” ಎಂದು ಭರವಸೆ ನೀಡಿದರು.ಈ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

LEAVE A REPLY

Please enter your comment!
Please enter your name here