ಪುತ್ತೂರು: ಇಲ್ಲಿ ಹಿಂದೂ ಕಾರ್ಯಕರ್ತರಿಗೆ ಪೊಲೀಸರಿಂದ ಅಮಾನವೀಯವಾಗಿ ಥಳಿಸಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಾರ್ಯಕರ್ತರನ್ನು ಭೇಟಿಯಾಗಿ ಘಟನೆ ಬಗ್ಗೆ ತಿಳಿದುಕೊಂಡು, ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.
ಈ ವೇಳೆ ಹರೀಶ್ ಪೂಂಜರೊಂದಿಗೆ ಮಾತನಾಡಿದ ಕಾರ್ಯಕರ್ತರು “ನಿಮ್ಮಂತಹ ಶಾಸಕ ಇರುತ್ತಿದ್ದರೇ ಸದಾ ನಾವು ನಿಮ್ಮೊಂದಿಗೆ ಇರುತ್ತಿದ್ದೆವು.ಇವರು ಜಾತಿಯನ್ನು ನೋಡಿ ನಾವ್ಯಾಕೆ ಮತ ಹಾಕಬೇಕು. ನಿಮ್ಮಂತವರು ಇರುತ್ತಿದ್ದರೆ ನಾವು ಇಡೀ ಪುತ್ತೂರೇ ಇರುತ್ತಿತ್ತು.ಆದರೆ ಇಂತಹ ನಾ**ಗಳು ಇರಬಾರದು” ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾರ್ಯಕರ್ತರೊಂದಿಗೆ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ “ಬೆಳ್ತಂಗಡಿ ಶಾಸಕನಾಗಿ ಪುತ್ತೂರಿನವರಿಗೆ ಶಾಸಕನಿಲ್ಲ ಅನ್ನುವ ಬೇಸರ ಮಾಡಬೇಡಿ.ನಾನು ನಿಮ್ಮ ಶಾಸಕನ ತರ ನಿಮ್ಮೊಂದಿಗೆ ಬರುತ್ತೇನೆ” ಎಂದು ಭರವಸೆ ನೀಡಿದರು.ಈ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
Home ಗ್ರಾಮಾಂತರ ಸುದ್ದಿ ಪುತ್ತೂರಿಗೆ ಶಾಸಕರಿಲ್ಲ ಅಂತ ಬೇಸರಿಸಬೇಡಿ..ನಾನೇ ನಿಮ್ಮ ಶಾಸಕರ ತರ ನಿಮ್ಮೊಂದಿಗಿರ್ತೇನೆ – ಪುತ್ತೂರಲ್ಲಿ ಕಾರ್ಯಕರ್ತರಿಗೆ ಪೂಂಜ...