ಉಜಿರೆಯಲ್ಲಿ ಅಶ್ವ ಆಟೋ ಮಲ್ಟಿ ಬ್ರಾಂಡ್ ಕಾರ್ ಗ್ಯಾರೇಜ್ ಶುಭಾರಂಭ

0

ಉಜಿರೆ: ಅಶ್ವ ಆಟೋ ಮಲ್ಟಿ ಬ್ರಾಂಡ್ ಕಾರ್ ಗ್ಯಾಾರೇಜನ್ನು ಉಜಿರೆಯ ಶ್ರೀ ಜರ್ನಾಧನ ಸ್ವಾಮಿ ದೇವಸ್ಥಾಾನ ಅನುವಂಶಿಕ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಅವರು ಮೇ 4ರಂದು ಲೋಕಾರ್ಪಣೆಗೊಳಿಸಿದರು. ಅಶ್ವ ಆಟೋ ಮಲ್ಟಿ ಬ್ರಾಾಂಡ್ ಕಾರ್ ಗ್ಯಾರೇಜ್ ಜನತೆಗೆ ಉತ್ತಮ ಸೇವೆ ನೀಡಿ ಯಶಸ್ಸು ಪಡೆಯಲಿ ಎಂದು ಶರತ್ ಕೃಷ್ಣ ಪಡ್ವೆಟ್ನಾಯ ಅವರು ಶುಭ ಹಾರೈಸಿದರು.

ಮುಖ್ಯ ಅತಿಥಿ ಉಜಿರೆಯ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೇಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ರಂಜಾನ್ ಜಿ ಗೌಡ ಮಾತನಾಡಿ, ಪುತ್ತೂರು, ಮಂಗಳೂರಿನಲ್ಲಿ ಮಾತ್ರ ಸಿಮಿತಾವಾಗಿದ್ದ ಇಂತಹ ಆಧುನಿಕ ತಂತ್ರಜ್ಞಾನವುಳ್ಳ ಈ ಸಂಸ್ಥೆೆಯು ಈಗ ಉಜಿರೆಯಲ್ಲಿ ಶುಭಾರಂಭಗೊಂಡಿದ್ದು, ಈ ಪರಿಸರದ ಜನತೆಗೆ ಅನುಕೂಲವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಗಂಗಾಧರ ಗೌಡ ಮಾತನಾಡಿ, ಸಮಾಜಕ್ಕೆ ಈ ಸಂಸ್ಥೆ ಮಾದರಿಯಾಗಲಿ. ಜನತೆಗೆ ಉತ್ತಮ ಸೇವೆ ನೀಡಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾದ ಉಜಿರೆಯ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು, ಉಜಿರೆ ಸಿಎ ಬ್ಯಾಂಕ್‌ನ ನಿರ್ದೇಶಕ ಸುಂದರ ಗೌಡ ಇಚ್ಚಿಲ, ಬಂಗಾಡಿ ಸಿಎ ಬ್ಯಾಂಕ್‌ ಮಾಜಿ ಅಧ್ಯಕ್ಷ ಎನ್.ಲಕ್ಷಣ ಗೌಡ, ಸೈಂಟ್ ಸೆಬಾಸ್ಟೀನ್ ಅಟೋ ಇಂಜಿನಿಯರಿಂಗ್ ವರ್ಕ್‌ನ ಆ್ಯಂಟನಿ ಟಿ.ಆರ್, ಉದ್ಯಮಿ ಗಿರೀಶ್ ಪ್ರಭು, ಗ್ರಾಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಹಳೆಪೇಟೆ ಶುಭಹಾರೈಸಿದರು. ಇಂಜಿನಿಯರ್ ರಾಜೇಂದ್ರ, ಸಂತೋಷ ಗೌಡ ಕೋಯಿಜಲು, ಭಾರತಿ ಮೋಹನ್, ಕುಂಞಣ್ಣ ಗೌಡ, ಆಶಾ, ಮಹೇಶ್, ಆಶ್ವಿಜ್, ಶೃಜನ್ ಉಪಸ್ಥಿತರಿದ್ದರು. ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೇಡಿಟ್ ಸೌಹಾರ್ದ ಸಹಕಾರಿ ಉಜಿರೆಯ ಮ್ಯಾನೇಜರ್ ದಿನೇಶ್ ಗೌಡ ಕೆಲ್ಲಾಜೆ ಸ್ವಾಗತಿಸಿ, ಶ್ರಾವ್ಯ ವಂದಿಸಿದರು.ಅಭಿಜಿತ್ ಗೌಡ ಅಂತರ ನಿರೂಪಿಸಿದರು.
ಅಶ್ವ ಆಟೋ ಮಲ್ಟಿ ಬ್ರಾಂಡ್ ಕಾರ್ ಗ್ಯಾರೇಜ್‌ನಲ್ಲಿ ಲಭ್ಯವಿರುವ ಸೇವೆಗಳು: ಜನರಲ್ ಕಾರ್ ರಿಪೇರಿ, ಪೀರಿಯಾಡಿಕಲ್ ಮೈಂಟೆನೆನ್‌ಸ್‌, ಕಾರ್ ಬಾಡಿ ಮತ್ತು ಪೈಂಟ್ ವರ್ಕ್‌ಸ್‌, ಕಾರ್ ವಾಶ್ ಮತ್ತು ಸ್ಪ್ರೆ ಸೇವೆಗ ಲಭ್ಯವಿದೆ.

LEAVE A REPLY

Please enter your comment!
Please enter your name here