ಓಡಲ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ, ನೇಮೋತ್ಸವ

0

ಉಜಿರೆ: ಇಲ್ಲಿಯ ಓಡಲ ಚಾಮುಂಡಿ ನಗರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಎ.29 ರಂದು ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಪಿ.ರಾಜಗೋಪಾಲ ಯಡಪಡಿತ್ತಾಯರವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಬೆಳಿಗ್ಗೆ ಪಂಚಗವ್ಯ, ಪುಣ್ಯಾಹ, ಕಲಶ ಪ್ರತಿಷ್ಠೆ, ಗಣಪತಿ ಹೋಮ, ಕಲಶಾಭಿಷೇಕ, ಪರ್ವ, ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ಉಜಿರೆ ಛತ್ರಪತಿ ಶಿವಾಜಿ ಕುಣಿತ ಭಜನಾ ತಂಡ ದಿಂದ ಭಜನೆ, ರಾತ್ರಿ ಭಂಡಾರ ತೆಗೆದು ದೈವಕ್ಕೆ ಎಣ್ಣೆ ಬೂಳ್ಯ, ಬಳಿಕ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿದ್ಯ ಕಾರ್ಯಕ್ರಮ ನಡೆಯಿತು.ರಾತ್ರಿ ಶ್ರೀ ವ್ಯಾಘ್ರಚಾಮುಂಡಿ ನೇಮೋತ್ಸವ ಜರಗಿತು.ಮೇ.1 ರಂದು ಕೊಜಪ್ಪಾಡಿ ಶೋಭಾ ಮತ್ತು ಸತೀಶ್ ಪೂಜಾರಿ ಮತ್ತು ಮಕ್ಕಳಿಂದ ಹರಕೆಯ ನೇಮೋತ್ಸವ ನಡೆಯಿತು.

ಶ್ರೀ ವ್ಯಾಘ್ರಚಾಮುಂಡಿ ಸೇವಾ ಟ್ರಸ್ಟ್ ಸ್ಥಾಪಕ ಎಂ. ಜಿ. ಶೆಟ್ಟಿ, ಅಧ್ಯಕ್ಷ ಸೀತಾರಾಮ ಶೆಟ್ಟಿ,ಕಾರ್ಯದರ್ಶಿ ಪರಮೇಶ್ವರ, ಉಪಾಧ್ಯಕ್ಷ ಹರೀಶ ಕಾವ, ಕೋಶಾಧಿಕಾರಿ ಸುರೇಶ ಆಚಾರ್, ಜೊತೆ ಕಾರ್ಯದರ್ಶಿ ಚಿತ್ರೇಶ್ ಶೆಟ್ಟಿ, ಟ್ರಸ್ಟಿಗಳಾದ ಶ್ರೀನಿವಾಸ ಗೌಡ ಮಧುರ, ವಿದ್ಯಾ ಕುಮಾರ್ ಕಂಚೋಡ್ ಫಾರ್ಮ್, ವಿನಯಚಂದ್ರ ಬೆಳಕು, ಸುರೇಶ ಗೌಡ ಕೂಡಿಗೆ, ವಿಶಾಲಾಕ್ಷಿ ರಾಮಣ್ಣ ನಾಯ್ಕ, ಅಣ್ಣಿ ಗೌಡ ಮೇಂದ್ರೆಲ್, ಹಾಗೂ ಖಾಯಂ ಆಹ್ವಾನಿತರಾದ ಪದ್ದಣ್ಣ ಗೌಡ, ಪುಷ್ಪ ಶ್ರೀನಿವಾಸ ಗೌಡ ಮತ್ತು ಪ್ರತಿಷ್ಠಾ ವರ್ಧಂತ್ಯುತ್ಸವ ಸಮಿತಿ ಸದಸ್ಯರು ಊರ, ಪರಊರ ಭಕ್ತರು ಹಾಜರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here