ಕಾಂಗ್ರೆಸ್ ಪಕ್ಷದ ವತಿಯಿಂದ ಕಳಿಯ, ನ್ಯಾಯತರ್ಪು ಮನೆ-ಮನೆ ಮಹಾ ಸಂಪರ್ಕ ಮತಯಾಚನೆ

0

ಕಳಿಯ: ಬೆಳ್ತಂಗಡಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಮಹಾ ಸಂಪರ್ಕ ಅಭಿಯಾನ ಬೆಳ್ತಂಗಡಿಯ ಕಳಿಯ ಪಂಚಾಯತ್ ವ್ಯಾಪ್ತಿಯಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ರವರ ಪರವಾಗಿ ಮತಯಾಚನೆ ಮೇ.1ರಂದು ಯಶಸ್ವಿಯಾಗಿ ನಡೆಸಿದರು.

ಈ ಅಭಿಯಾನವು ಕಾಂಗ್ರೆಸ್ ಕಾರ್ಯಕರ್ತರಲ್ಲೀ ಹೊಸ ಉತ್ಸಾಹವನ್ನು ಮೂಡಿಸುವ ಜೊತೆಗೆ ಮತದಾರರಿಂದ ಉತ್ತಮ ಬೆಂಬಲ ದೊರೆಯಿತು.

ಕಾಂಗ್ರೆಸ್ ಸಂಪರ್ಕ ಅಭಿಯಾನದಲ್ಲಿ ಕೇರಳದ ಇರಿಕ್ಕೂರು ಶಾಸಕರಾದ ಸಜೀವ್ ಜೋಸೆಫ್ ಎಐಸಿಸಿ ನಿರೀಕ್ಷಕರು, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಗೌಡ ಜಿ, ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್.ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಅನಿಲ್ ಪೈ, ಧರಣೇಂದ್ರ ಕುಮಾರ್, ಅಭ್ಯರ್ಥಿ ರಕ್ಷಿತ್ ಶಿವರಾಂ ರವರ ಪತ್ನಿ ಶ್ರೀಮತಿ ಅನ್ವಿಕಾ ರಕ್ಷಿತ್ ಶಿವರಾಂ,ಕಳಿಯ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಕೇಶ‌ವ ಪೂಜಾರಿ ನಾಳ, ಅಧ್ಯಕ್ಷ ಶರತ್ ಕುಮಾರ್,ಉಪಾಧ್ಯಕ್ಷ ಸತೀಶ್ ಕುಮಾರ್ ನೈಾಕ್ ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್ ಬಂಗಾಡಿ ,ಕಳಿಯ ಗ್ರಾಮ ಪಂಚಾಯತು ಸದಸ್ಯರಾದ ಕೆ.ಎಮ್. ಅಬ್ದುಲ್ ಕರೀಂ,ಮರಿತಾ ಪಿಂಟೋ,ಹರೀಶ್ ಕುಮಾರ್ ಬಿ, ಲತೀಫ್ ಪರಿಮ, ಪುಷ್ಪ, ಮೋಹಿನಿ,ಪಕ್ಷದ ಪ್ರಮುಖ ಕಾರ್ಯಕರ್ತರಾದ ಹರೀಶ್ ಗೌಡ ಕೆರೆಕೋಡಿ, ಇಸ್ಮಾಯಿಲ್ ಪಲ್ಲಾದೆ, ರಾಘವ ಹೆಚ್, ಹಕೀಮ್ ಗೋವಿಂದೂರು, ಹಾಗೂ ಪಕ್ಷದ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here