ಕೊಕ್ಕಡ: ಹಳ್ಳಿಂಗೇರಿ ಸಮೀಪ ಮರ ಬಿದ್ದು ಮಹಿಳೆ ಮೃತ್ಯು

0

ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಸಮೀಪದ ಕ್ವಾಟ್ರಸ್ ಎಂಬಲ್ಲಿ ವ್ಯಕ್ತಿಯೊಬ್ಬರು ಮನೆ ಸಮೀಪದ ಮರದ ರೆಂಬೆ ಕಡಿಯುವ ಸಂದರ್ಭ ಆಕಸ್ಮಿಕವಾಗಿ ಮಹಿಳೆಯ ತಲೆಗೆ ಬಿದ್ದು ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಎ.28 ರಂದು ನಡೆದಿದೆ.
ಕ್ವಾಟ್ರಸ್ ನಿವಾಸಿ ದಾಮೋದರ ಆಚಾರ್ಯ ಎಂಬವರ ಪತ್ನಿ ಗಾಯತ್ರಿ ಆಚಾರ್ಯ 60 ವರ್ಷ ಮೃತಪಟ್ಟ ದುರ್ದೈವಿ.

ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಇವರು ಪತಿ ದಾಮೋದರ ಆಚಾರ್ಯ, ಮಗ ಹರೀಶ್, ಮಗಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here