ಸ್ಪೀಚ್ ಕ್ರಾಫ್ಟ್ ತರಬೇತಿಯಲ್ಲಿ ಚಂದ್ರಹಾಸ ಬಳಂಜರವರಿಗೆ ಪ್ರಶಸ್ತಿ

0

ಬೆಳ್ತಂಗಡಿ: ಜೆಸಿಐ ವತಿಯಿಂದ ಮೂರು ದಿವಸಗಳ ಕಾಲ ನಡೆಯುವ ವಲಯದ ಅತ್ಯುತ್ತಮ ತರಬೇತಿ ಕಾರ್ಯಕ್ರಮಗಳಲ್ಲಿ ಒಂದಾದ ಸ್ಪೀಚ್ ಕ್ರಾಫ್ಟ್ ತರಬೇತಿ ಕಾರ್ಯಗಾರ ಎ.14- ಎ.16 ರವರೆಗೆ ನಿಟ್ಟೆಯಲ್ಲಿ ನಡೆಯಿತು.ಕೇವಲ 30 ಜನ ಶಿಬಿರಾರ್ಥಿಗಳು ಮಾತ್ರ ಭಾಗವಹಿಸಿದ ಈ ತರಬೇತಿ ಕಾರ್ಯಗಾರದಲ್ಲಿ ಮಾತುಗಾರಿಕೆಯ ಬಗ್ಗೆ ವಿವಿಧ ರೀತಿಯ ತರಬೇತಿಗಳನ್ನು ನೀಡಲಾಯಿತು.

ಬೆಂಗಳೂರಿನ ಅನುರಾಧ ಹಾಗೂ ಮಂಗಳೂರಿನ ರಾಘವೇಂದ್ರ ಹೊಳ್ಳ, ಪ್ರಕಾಶ್ ಪೂಜಾರಿ ನಡೆಸಿದ ಈ ತರಬೇತಿಯಲ್ಲಿ ಜೆ ಸಿ ಐ ಬೆಳ್ತಂಗಡಿ ಮಂಜುಶ್ರೀಯಿಂದ ಭಾಗವಹಿಸಿದ್ದ ಸದಸ್ಯ ಚಂದ್ರಹಾಸ ಬಳಂಜ ತಮ್ಮ ಮಾತುಗಾರಿಕೆ ಪ್ರತಿಭೆಯಿಂದ ಉತ್ತಮ ರೀತಿಯಲ್ಲಿ ತರಬೇತಿಯಲ್ಲಿ ಪಾಲ್ಗೊಂಡು ಔಟ್ ಸ್ಟ್ಯಾಂಡಿಂಗ್ ಪಾರ್ಟಿಸಿಪೆಂಟ್ ಆಗಿ ಮೂಡಿ ಬಂದಿದ್ದಾರೆ. ಬೆಂಗಳೂರು, ಪುತ್ತೂರು, ಉಡುಪಿ, ಕುಂದಾಪುರ, ಮಂಗಳೂರು ನಿಂದ ಶಿಬಿರಾರ್ಥಿಗಳು ಪಾಲ್ಗೊಂದಿದ್ದರು

LEAVE A REPLY

Please enter your comment!
Please enter your name here