ಮೂಡುಕೋಡಿ ಸತ್ಯ ಸಾರಮನಿ ಕ್ಷೇತ್ರದಲ್ಲಿ ಅ೦ಬೇಡ್ಕರ್ ಜಯಂತಿ

0

ಮೂಡುಕೋಡಿ :ವೇಣೂರು ಗ್ರಾಮ ಪ೦ಚಾಯತ್ ವ್ಯಾಪ್ತಿಯ ಮೂಡುಕೋಡಿ ಶ್ರೀ ಸತ್ಯ ಸಾರಮನಿ ಕ್ಷೇತ್ರದಲ್ಲಿ ಸ೦ವಿಧಾನ ಶಿಲ್ಪಿ ಡಾ.ಬಿ ಆರ್. ಅ೦ಬೆಡ್ಕರ್ ಅವರ 132 ನೇ ಜಯಂತಿಯನ್ನು ಆಚರಿಸಲಾಯಿತು. ಕ್ಷೇತ್ರದ ಪ್ರಮುಖರಾದ ಬಾಬು ಕಲ್ಯರಡ್ಧ, ಆನಂದ ಪಾದೆ ದೀಪ ಬೆಳಗಿಸಿದರು.ವೇಣೂರು ಸಿ.ಎ ಬ್ಯಾಂಕ್ ಅಧ್ಯಕ್ಷ ಸು೦ದರ ಹೆಗ್ಡೆಯವರು ಮಾತನಾಡಿ ಬಿ.ಆರ್ ಅ೦ಬೆಡ್ಕರ್ ಅವರು ದೀನ ದಲಿತರ ಶೋಷಿತರ ಧ್ವನಿಯಾಗಿದ್ದರು ಎಂದರು.

ಪ೦ಚಾಯತ್ ಸದಸ್ಯ ಅನೂಪ್ ಜೆ.ಪಾಯಸ್ ಮಾತನಾಡಿ ಈಗಾಗಲೇ ಪ೦ಚಾಯತ್ ವತಿಯಿಂದ ಅಂಬೇಡ್ಕರ್ ಭವನಕ್ಕೆ 1 ಎಕ್ರೆ ಜಾಗವನ್ನು ಮೂಡುಕೋಡಿಯಲ್ಲಿ ಮೀಸಲಿರಿಸಿದೆ.

ಪ೦ಚಾಯತ್ ಸದಸ್ಯ ಹರೀಶ್ ಪಿ.ಎಸ್‌. ಮೂಡುಕೋಡಿ ಹಾಲು ಉತ್ಪಾದಕರ ಸಹಕಾರಿ ಸ೦ಘದ ಅಧ್ಯಕ್ಷ ಪ್ರಕಾಶ್ ಭಟ್ ಕಮಿಟಿಯ ಪ್ರಮುಖರಾದ ವಿಮಲ, ಗೀತಾ, ಚ೦ದ್ರಾವತಿ, ಚ೦ದ್ರಶೇಖರ್, ಸದಾನಂದ ಮೊದಲಾದವರು ಉಪಸ್ಥಿತರಿದ್ದರು. ನೈಮ೯ಲ್ಯ ಸಮಿತಿಯ ಸದಸ್ಯ ಧರ್ಮರಾಜ್ ಕೊಪ್ಪದಬಾಕಿಮಾರು ಸ್ವಾಗತಿಸಿ ವ೦ದಿಸಿದರು.

LEAVE A REPLY

Please enter your comment!
Please enter your name here