ಎ.14: ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಆದಿತ್ಯ ನಾರಾಯಣ ಕೊಲ್ಲಾಜೆ ನಾಮಪತ್ರ ಸಲ್ಲಿಕೆ ಮತ್ತು ಚುನಾವಣಾ ಪೂರ್ವ ತಯಾರಿ ಸಭೆ- ಪತ್ರಿಕಾಗೋಷ್ಠಿ

0

ಬೆಳ್ತಂಗಡಿ : ಕರ್ನಾಟಕ ರಾಜ್ಯ ರೈತ ಸಂಘದ ಬೆಂಬಲದ ಸರ್ವೋದಯ ಕರ್ನಾಟಕ ಪಕ್ಷದ ಬೆಳ್ತಂಗಡಿ ವಿಧಾನ ಸಭಾ ಅಭ್ಯರ್ಥಿ ಆದಿತ್ಯ ನಾರಾಯಣ ಕೊಲ್ಲಾಜೆ ನಾಮಪತ್ರ ಸಲ್ಲಿಕೆ ಮತ್ತು ಚುನಾವಣಾ ಪೂರ್ವ ತಯಾರಿ ಸಭೆ ಎ.14 ರಂದು ನಡೆಯಲಿದೆ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಹೇಳಿದರು.ಅವರು ಎ.13 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
42 ವರ್ಷದ ಇತಿಹಾಸವಿರುವ ರೈತ ಸಂಘ ರೈತರ ಪರ ಹೋರಾಟ ಮಾಡುತ್ತಾ ಬರುತ್ತಿದೆ.ಈಗಿನ ಸರಕಾರ ರೈತರ ನೋವಿಗೆ ಸ್ಪಂದಿಸುತ್ತಿಲ್ಲ.ರೈತರ ನ್ಯಾಯಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧೆ ಅನಿವಾರ್ಯವಾಗಿದೆ.
“ವಿದ್ಯುತ್ ಬೆಲೆಯೇರಿಕೆ, ಹಳ್ಳಿಗಳಲ್ಲಿ ಮೂಲಭೂತ ಹಕ್ಕುಗಳ ಸೌಕರ್ಯ ಇಲ್ಲ, ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದೆ , ಅಡುಗೆ ಎಣ್ಣೆ ಬೆಲೆ ಏರಿಕೆ, ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೆ, ಗ್ಯಾಸ್ ಬೆಲೆ ಏರಿಕೆ, ಅಕ್ರಮ ಟೋಲ್ ಶುಲ್ಕಗಳು, ಸಾಮಾನ್ಯ ಮತ್ತು ಬಡವರಿಗೆ ಹೆಚ್ಚಿನ ಬಡ್ಡಿ ದರದಲ್ಲಿ ಸಾಲಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಸರ್ಕಾರ ಮತ್ತು ಪಂಚಾಯತ್‌ನಿಂದ ಯಾವುದೇ ಬೆಂಬಲವಿಲ್ಲ, ರಸಗೊಬ್ಬರ ಮತ್ತು ಕೃಷಿ ಯಂತ್ರೋಪಕರಣಗಳ ಬೆಲೆ ಏರಿಕೆ, ವಿನಾಕಾರಣ ಕಡಿಮೆ ಬೆಲೆಗೆ ಸಹಾಯಧನ ಮತ್ತು ವಿಮೆ, ಮೇಲಾಧಾರವಿಲ್ಲದ ಯುವಕರು ಮತ್ತು ಮಹಿಳೆಯರಿಗೆ ಯಾವುದೇ ಉದ್ಯೋಗ ಸೃಷ್ಟಿ, ವಸತಿ, ಸಾಲಗಳು, ವ್ಯಾಪಾರ ಅವಕಾಶಗಳಿಲ್ಲ, ಕಾರ್ಮಿಕರು, ರಿಕ್ಷಾ, ಟ್ಯಾಕ್ಸಿ, ಲಾರಿ, ಬಸ್ ಡ್ರೈವರ್‌ಗಳಂತಹ ದೈನಂದಿನ ವೇತನದಾರರಿಗೆ ಬೆಂಬಲವಿಲ್ಲ, ಸರ್ಕಾರದಿಂದ ವಿಸ್ತರಣೆಗಾಗಿ ಸಣ್ಣ ಅಂಗಡಿಗಳು, ಪಡಿತರ ಅಂಗಡಿಗಳು ಮತ್ತು ಸಣ್ಯ ವ್ಯಾಪಾರಗಳಿಗೆ ಯಾವುದೇ ಬೆಂಬಲವಿಲ್ಲ, ಕರ್ನಾಟಕದಲ್ಲಿ ರೈತರ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಇಲ್ಲ. ಪಡೆದ ಸಾಲದ ಮೇಲಕ್ಕೆ ಬಡ್ಡಿ ಸಹಾಯಧನ ನಿಲ್ಲಿಸಲಾಗಿದೆ ಕಷ್ಟಪಟ್ಟು ಡಬಲ್ ಡಿಗ್ರಿ ಮಾಡಿ ಸರ್ಕಾರಿ ಉದ್ಯೋಗ ಪಡೆಯಲು ನಿರಂತರವಾಗಿ ಅಧ್ಯಯನ ಮಾಡುತ್ತಿರುವ ಪದವೀಧರರಿಗೆ ವರ್ಷಕ್ಕೊಮ್ಮೆಯಾದರೂ ಅಧಿಸೂಚನೆಗಳನ್ನು ಹೊರಡುತ್ತಿಲ್ಲ.ಸರ್ಕಾರದ ಕೆಟ್ಟ ನಿರ್ಧಾರದಿಂದ ಅತಿಥಿ ಉಪನ್ಯಾಸಕರು, ಅಧ್ಯಾಪಕರು ಮತ್ತು ಯುವಕರು ಉದ್ಯೋಗ ಕಳೆದುಕೊಂಡು ಈಗ ನಿರುದ್ಯೋಗಿಗಳಾಗಿದ್ದಾರೆ. ಆದರೆ ಯಾರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಮೊಟಕುಗೊಳಿಸುವ ದರ್ಪ ಮೆರೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯನಿರತವಾಗಿರುವ ಯಾರೊಬ್ಬರೂ ಧ್ವನಿ ಎತ್ತುವುದಿಲ್ಲ. ಈ ಕಾರಣಕ್ಕಾಗಿಯೇ ಸರ್ವೋದಯ ಕರ್ನಾಟಕ ಪಕ್ಷವು ತನ್ನ ಅಭ್ಯರ್ಥಿಗಳ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ ಎಂದರು.
ಅಭ್ಯರ್ಥಿ ಆದಿತ್ಯ ನಾರಾಯಣ ಕೊಲ್ಲಾಜೆ ಮಾತನಾಡಿ ಚುನಾವಣೆ ತಯಾರಿಗಾಗಿ ಮಾ.17 ರಿಂದ ತಾಲೂಕಿನ 25 ಗ್ರಾಮದಲ್ಲಿ ಸುಮಾರು 350 ಕಿ.ಮೀ ಪಾದಯಾತ್ರೆ ಮೂಲಕ ಮನೆ ಮನೆ ಭೇಟಿ ಜನಸಾಮಾನ್ಯರ ಸಮಸ್ಯೆ ತಿಳಿದುಕೊಂಡು ಪರಿಹಾರಕ್ಕೆ ಪ್ರಯತ್ನ ಮಾಡಲಾಗಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಅವಿನಾಶ್, ಉಪಾಧ್ಯಕ್ಷ ಉಮೇಶ ಪೂಜಾರಿ, ಜಿಲ್ಲಾ ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here