ಗುರುವಾಯನಕೆರೆ: ಶ್ರೀ ವೇದವ್ಯಾಸ ಶಿಶುಮಂದಿರದ ಪುಟಾಣಿ ಮಕ್ಕಳಿಗೆ ಶಿಶು ಶಿಕ್ಷಣ ಪ್ರಮಾಣ ಪತ್ರ

0

ಗುರುವಾಯನಕೆರೆ: ಗುರುವಾಯನಕೆರೆ ಹವ್ಯಕ ಭವನದಲ್ಲಿ ಏ.9ರಂದು ಶ್ರೀ ವೇದವ್ಯಾಸ ಶಿಶುಮಂದಿರ, ಶಿವಾಜಿನಗರ, ಗುರುವಾಯನಕೆರೆ ಇಲ್ಲಿಯ ಪುಟಾಣಿ ಮಕ್ಕಳಿಗೆ ಶಿಶು ಶಿಕ್ಷಣ ಪ್ರಮಾಣ ಪತ್ರ ಹಾಗೂ ಇವರ ಜೊತೆ ಬಾಲಗೋಕುಲದ ಮಕ್ಕಳನ್ನು ಸೇರಿ ಮಾತೃ ಪೂಜನೀಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಇಂದುಮತಿ ಶ್ರೀ ವೇದವ್ಯಾಸ ಶಿಶು ಮಂದಿರ ಇವರು ವಹಿಸಿದ್ದರು.ಹಾಗೂ ಕಾರ್ಯಕ್ರಮದಲ್ಲಿ ಮಾತ್ರ ಮಂಡಳಿಯ ಅಧ್ಯಕ್ಷೆ ಸ್ವಾತಿ, ಬೌದ್ಧಿಕ ಶ್ರೀಮತಿ ಆಶಾ ಬೆಳ್ಳಾರೆ, ಪುತ್ತೂರು ಶ್ರೀ ವಿವೇಕಾನಂದ ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿ ಶ್ರೀಮತಿ ಆಶಾ ಬೆಳ್ಳಾರೆ, ಕೋಶಾಧಿಕಾರಿ ಶ್ರೀಮತಿ ಪ್ರಿಯದರ್ಶಿನಿ, ಮಲ್ಲಿಕಾ, ಮಂಗಳ, ರಾಮಚಂದ್ರ ಶೆಟ್ಟಿ, ರತ್ನಾಕರ್ ರಾವ್, ಸೋಮಶೇಖರ್ ದೇವಸ್ಯ, ಹೇಮಂತ್ ದೇವಸ್ಯ, ರಾಷ್ಟ್ರ ಸೇವಿಕಾ ಸಮಿತಿಯ ಸುಗುಣ ಇವರು ಉಪಸ್ಥಿತರಿದ್ದರು.

ಮಾತಾಜಿಯವರಾದ ಮಂಜುಳಾ ಹಾಗೂ ಅಶ್ವಿನಿ ಮಾತಾಜಿ ಉಪಸ್ಥಿತರಿದ್ದರು.ಶ್ರೀಮತಿ ಸುಧಾಮಣಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here