ಮೇಲಂತಬೆಟ್ಟು ಭಗವತಿ ದೇವಸ್ಥಾನಕ್ಕೆ ಹೋಗುವ ದಾರಿಗೆ ಬೇಲಿ-ಪಂಚಾಯತ್, ಪೊಲೀಸರ ಮುಂದಾಳತ್ವದಲ್ಲಿ ವಿವಾದ ಅಂತ್ಯ-ಬೇಲಿ ತೆರವು

0

ಮೇಲಂತಬೆಟ್ಟು: ಶ್ರೀದೇವಿ ಭಗವತಿ ಅಮ್ಮನವರ ದೇವಸ್ಥಾನ ಮೇಲಂತಬೆಟ್ಟುವಿನಲ್ಲಿ ಏಪ್ರಿಲ್ 3ರಿಂದ ಏಪ್ರಿಲ್ 7ರವರೆಗೆ ಬ್ರಹ್ಮಕಲಶೋತ್ಸವ ನಿಗದಿಯಾಗಿದ್ದು, ನಿನ್ನೆ ಸಂಜೆಯಿಂದ ರಸ್ತೆಯ ವಿವಾದ ಹೊಸ ಸಂಚಲನ ಉಂಟು ಮಾಡಿತ್ತು. ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಅಗಲೀಕರಣ ಗೊಳಿಸುವ ವಿಚಾರದಲ್ಲಿ ಸ್ಥಳೀಯರಾದ ಸಚಿನ್ ರವರು ವಿರೋಧ ವ್ಯಕ್ತಪಡಿಸಿದ್ದರು.

ತಮಗೆ ಸೇರಿದ ಜಾಗ ರಸ್ತೆಯಲ್ಲಿ ಇದೆಯೆಂದು ವಿರೋಧ ವ್ಯಕ್ತಪಡಿಸಿದ ನಂತರ ವಿವಾದ ತಾರಕಕ್ಕೇರಿತ್ತು. ಅಲ್ಲದೇ ತಡರಾತ್ರಿ ರಸ್ತೆಯನ್ನು ಬಂದ್ ಮಾಡಲಾಗಿತ್ತು.
ಪೊಲೀಸ್, ಪಂಚಾಯತ್ ಪ್ರಮುಖರ ಸಮ್ಮುಖದಲ್ಲಿ ವಿವಾದ ಇತ್ಯರ್ಥ ಏಕಾಏಕಿ ರಸ್ತೆಯನ್ನು ಬಂದ್ ಮಾಡಿರುವ ಕುರಿತು ವಿವಾದಗಳು ತಾರಕಕ್ಕೇರುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರು, ಪಂಚಾಯತ್ ಪ್ರಮುಖರು ಎರಡೂ ಕಡೆಯವರನ್ನು ಮಾತನಾಡಿಸಿ ವಿವಾದ ಬಗೆಹರಿಸಿದ್ದಾರೆ. ಈಗಾಗ್ಲೇ ಇರುವ ರಸ್ತೆಗೆ ಬೇಲಿ ಹಾಕದಂತೆ ಸೂಚಿಸಲಾಗಿದ್ದು, ಮೊದಲಿನಂತೆ ರಸ್ತೆ ಮತ್ತೆ ಸಂಚಾರಕ್ಕೆ ಮುಕ್ತವಾಗಿದೆ.

LEAVE A REPLY

Please enter your comment!
Please enter your name here