ಪಿಲಿಪಂಜರ ಕ್ಷೇತ್ರ ಶ್ರೀ ಉಳ್ಳಾಲ್ತಿ, ಮೈಸಂದಾಯ, ಪಂಜುರ್ಲಿ, ಗುಳಿಗ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

0

ಲಾಯಿಲ: ಪಿಲಿಪಂಜರ ಕ್ಷೇತ್ರ ಶ್ರೀ ಉಳ್ಳಾಲ್ತಿ, ಮೈಸಂದಾಯ, ಪಂಜುರ್ಲಿ, ಗುಳಿಗ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ದೈವಗಳ ನೇಮೋತ್ಸವವು ಮಾ.31 ರಂದು ಕ್ಷೇತ್ರದ ತಂತ್ರಿಗಳಾದ ಕಡೆಶಿವಾಲಯ ವೇದಮೂರ್ತಿ ಶ್ರೀ ಪಚ್ಚಡಿಬೈಲು ಪಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.


ಬೆಳಿಗ್ಗೆ ಪುಣ್ಯಾಹವಾಚನ, ಗಣಹೋಮ, ನವಗ್ರಹ ಪೂಜೆ, ಪ್ರತಿಷ್ಠಾ ಕಲಶ, ಪ್ರತಿಷ್ಠಾ ಹೋಮ, ಶ್ರೀ ಉಳ್ಳಾಕ್ಕುಲ-ಉಳ್ಳಾಲ್ತಿ -ಮೈಸಂದಾಯ, ಪಂಜುರ್ಲಿ-ಗುಳಿಗ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ , ಅಲಂಕಾರ ಪೂಜೆ ಮಧ್ಯಾಹ್ನ ಶ್ರೀ ದೈವಗಳಿಗೆ ಪರ್ವಾದಿಗಳ ಸೇವೆ ಹಾಗೂ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.
ಸಂಜೆ ಭಂಡಾರ ಇಳಿಸುವುದು, ಮೈಸಂದಾಯ-ಉಳ್ಳಾಕ್ಕುಲು -ಉಳ್ಳಾಲ್ತಿ-ಪಂಜುರ್ಲಿ -ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.


ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯರು, ಅಧ್ಯಕ್ಷ ಸಂಜೀವ ಶೆಟ್ಟಿ ಕುಂಠಿನಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಕೋಶಾಧಿಕಾರಿ ಗಿರೀಶ್ ಡೊಂಗ್ರೆ, ಸದಸ್ಯರು, ಊರವರು ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here