ನೆರಿಯ: ರೂ.5 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ಆಲಂಗಾಯಿ ವಾಲ್ಮೀಕಿ ಆಶ್ರಮ ಶಾಲಾ ಕಟ್ಟಡದ ಶಿಲಾನ್ಯಾಸ

0

ನೆರಿಯ: ನೆರಿಯ ಗ್ರಾಮ ಪಂಚಾಯತು ವ್ಯಾಪ್ತಿಯ ಆಲಂಗಾಯಿ ವಾಲ್ಮೀಕಿ ಆಶ್ರಮ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜ ರೂ.5 ಕೋಟಿ ಅನುದಾನವನ್ನು ನೀಡಿ, ಮಾ.28 ರಂದು ಶಿಲಾನ್ಯಾಸ ಕಾರ್ಯ ನೆರವೇರಿಸಿದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್, ನೆರಿಯ ಗ್ರಾ.ಪಂ. ಅಧ್ಯಕ್ಷೆ ವಸಂತಿ , ಉಪಾಧ್ಯಕ್ಷೆ ಕುಶಲ, ಸಮಾಜ ಕಲ್ಯಾಣಧಿಕಾರಿ ಹೇಮಚಂದ್ರ, ಹೇಮಾವತಿ , ಗ್ರಾ.ಪಂ. ಸದಸ್ಯ ಬಾಬು ಗೌಡ ಪರ್ಪಳ, ಮೂರನೇ ವಾರ್ಡಿನ ಪಂ. ಸದಸ್ಯರು, ಮುಖ್ಯ ಶಾಲಾ ಶಿಕ್ಷಕ ಕೃಷ್ಣಪ್ಪ, ಸ್ಥಳೀಯರಾದ ಕಾಂತಪ್ಪ ಆಲಂಗಾಯಿ, ಹರೀಶ್ ಆಲಂಗಾಯಿ, ಹರಿಪ್ರಸಾದ್ ಆಲಂಗಾಯಿ, ನೆರಿಯ ಶಕ್ತಿ ಕೇಂದ್ರದ ಅಧ್ಯಕ್ಷ ವಿಶ್ವನಾಥ ನೆರಿಯ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here