ಮಾ.27: ನಾರಾವಿಯಲ್ಲಿ ಶ್ರೀ ಸಾಯಿನಿಧಿ ಟೆಕ್ಸ್‌ಟೈಲ್ಸ್ ಸಿಲ್ಕ್ಸ್ ಶುಭಾರಂಭ

0

ನಾರಾವಿ: ಇಲ್ಲಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಹತ್ತಿರ ಇರುವ ನೂತನ ಕಾಂಪ್ಲೆಕ್ಸ್‌ನಲ್ಲಿ ಶ್ರೀ ಸಾಯಿನಿಧಿ ಟೆಕ್ಸ್ ಟೈಲ್ಸ್ ಸಿಲ್ಕ್ಸ್ ಮಾ.27 ರಂದು ಶುಭಾರಂಭಗೊಳ್ಳಲಿದೆ.
ಸೋಲೂರು ಮಠ ಬೆಂಗಳೂರು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ನಾರಾವಿ ಸಂತ ಅಂತೋಣಿ ಚರ್ಚ್ ಧರ್ಮಗುರು ವಂ. ಪಾ. ಸೈಮನ್ ಡಿಸೋಜಾ ಬಲ್ಯೊಟ್ಟು ಮದ್ರಸಾ ಹೊಸ್ಮಾರ್ ಧರ್ಮಗುರು ಷರೀಫ್ ಮದನಿ ಆಶೀರ್ವಚನ ನೀಡಲಿದ್ದಾರೆ.


ಮುಂಬೈ ಭಾರತ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸೂರ್ಯಕಾಂತ್ ಜಯ ಸುವರ್ಣ ಉದ್ಘಾಟಿಸುವರು. ಮಾಜಿ ಶಾಸಕ ವಸಂತ ಬಂಗೇರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ವಿ. ಸುನಿಲ್ ಕುಮಾರ್, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜ, ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ, ನಾರಾವಿ ಸೂರ್ಯ ನಾರಾಯಣ ದೇವಸ್ಥಾನ ಪ್ರಧಾನ ಅರ್ಚಕ ಕೃಷ್ಣ ತಂತ್ರಿ, ಎ ಸೋಮನಾಥ ಮಯ್ಯ, ನಿರಂಜನ್ ಅಜ್ರಿ, ಗಂಗಾಧರ ಮಿತ್ತಮಾರ್, ಭಾಸ್ಕರ್ ಎಸ್ ಕೋಟ್ಯಾನ್, ಮಹಾವೀರ ಜೈನ್, ಎನ್ ಜಿವಂಧರ್ ಕುಮಾರ್, ಅಶೋಕ್ ಕುಮಾರ್ ಜೈನ್, ರವೀಂದ್ರ ಪೂಜಾರಿ, ಜಯಂತ್ ಕೋಟ್ಯಾನ್, ಎನ್ ಪ್ರೇಮ್ ಕುಮಾರ್, ಚಿದಾನಂದ ಎಲ್ದಡ್ಕ, ಆಡಿ.ಪ್ರಸಾದ್ ಬಿ.ಶೆಟ್ಟಿ, ಯೋಗೀಶ್ ಕುಮಾರ್, ಶ್ರೀನಿವಾಸ ಕಿಣಿ ಮೊದಲಾದ ಗಣ್ಯರು ಭಾಗವಹಿಸುವರು.

LEAVE A REPLY

Please enter your comment!
Please enter your name here