




ಕೊಕ್ಕಡ: ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಡಿ. 2ರಂದು ಶೀಲಾನ್ಯಾಸ ನಡೆಯಿತು. ಪಂಚಾಯತ್ ನಿಧಿಯ ಮೂಲಕ ಅಡೈಯಿ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಗೆ 2 ಲಕ್ಷ ವೆಚ್ಚ, ಹಳ್ಳಿoಗೇರಿ ಸೌತಡ್ಕ ಸಂಪರ್ಕ ರಸ್ತೆ ಮಲ್ಲಿಗೆ ಮಜಲು ಎಂಬಲ್ಲಿಗೆ ಕಾಂಕ್ರೀಟ್ ಗೆ 1 ಲಕ್ಷ ವೆಚ್ಚ, ಹಾರಪದ್ದಡ್ಕ ಒಳ ರಸ್ತೆಯ ಕಾಂಕ್ರೀಟ್ ಗೆ 1 ಲಕ್ಷ ವೆಚ್ಚ ಮೀಸಲಿರಿಸಿದ್ದು, ಕಾಮಗಾರಿಗೆ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಹಾಗೂ ಕೊಕ್ಕಡ ಸಿಎ ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಶಿಲಾನ್ಯಾಸ ನೆರವೇರಿಸಿದರು.


ಕೊಕ್ಕಡ ಪಂಚಾಯತಿ ಉಪಾಧ್ಯಕ್ಷ ಪ್ರಭಾಕರ ಗೌಡ ಮಲ್ಲಿಗೆ ಮಜಲು, ಕೊಕ್ಕಡ ಗ್ರಾಮ ಪಂಚಾಯತಿನ ನಿಕಟ ಪೂರ್ವ ಅಧ್ಯಕ್ಷ ಯೋಗೀಶ್ ಆಳಂಬಿಲ, ಉಪಾಧ್ಯಕ್ಷೆ ಪವಿತ್ರ, ಸದಸ್ಯರಾದ ವನಜಾಕ್ಷಿ, ಜಗದೀಶ್ ಕೆಂಪಕೋಡಿ, ಲತಾ, ಪುರುಷೋತ್ತಮ, ಜಾನಕಿ, ಕೊಕ್ಕಡ ಸಿ.ಎ. ಬ್ಯಾಂಕಿನ ನಿರ್ದೇಶಕ ಶ್ರೀನಾಥ್ ಬಡಕೈಲು, ರವಿಚಂದ್ರ, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ ಪ್ರಶಾಂತ್ ಪೂವಾಜೆ, ಬೆಳ್ತಂಗಡಿ ಮಂಡಲ ಎಸ್. ಟಿ. ಮೋರ್ಚಾ ಕಾರ್ಯದರ್ಶಿ ವಿಠಲ್ ಕುರ್ಲೆ, ಬೂತ್ ಸಮಿತಿಯ ಅಧ್ಯಕ್ಷ ಲಿಂಗಪ್ಪಗೌಡ ಕಡೀರ, ಕಾರ್ಯದರ್ಶಿ ಶ್ರೀಧರ ಬಳಕ, ಕಿಶೋರ್ ಪೋಯ್ಯೋಳೆ, ಪಂಚಾಯತ್ ಸಿಬಂದಿ ಕೇಶವ ಉಪಸ್ಥಿತರಿದ್ದರು.









