ಮಾ.4: ಗುರುವಾಯನಕೆರೆಯಲ್ಲಿ ದೈವರಾಜ ಗುಳಿಗ ನೇಮೋತ್ಸವ

0

ಗುರುವಾಯನಕೆರೆ: ಓಂಕಾರ ಯುವಕ ಮಂಡಲ ರತ್ನಗಿರಿ ಕೋಂಟುಪಲ್ಕೆ ಮತ್ತು ಕಿಣಿ ಕುಟುಂಬಸ್ಥರು ಹಾಗೂ ಊರ ಹತ್ತು ಸಮಸ್ಥರ ವತಿಯಿಂದ ವರ್ಷಂಪ್ರತಿ ನಡೆಯುವ ದೈವರಾಜ ಗುಳಿಗ ನೇಮೋತ್ಸವವು ಗುರುವಾಯನಕೆರೆ ರತ್ನಗಿರಿ ಸನ್ಯಾಸಿ ಗುಳಿಗ ಕ್ಷೇತ್ರದಲ್ಲಿ ಮಾ.4ರಂದು ನಡೆಯಲಿದೆ.
ಬೆಳಿಗ್ಗೆ ಗಂಟೆ 10.00ರಿಂದ ಕಲಶ ತಂಬಿಲ ಪರ್ವ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ ನಡೆಯುವ ನೇಮೋತ್ಸವಕ್ಕೆ ಸಹಾಯಾರ್ಥವಾಗಿ ಪ್ರತೀ ಮನೆಯಿಂದ ಸೀಯಾಳ, ತೆಂಗಿನಕಾಯಿಯನ್ನು ಪಾವತಿಸಬಹುದೆಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here