ಬೆಳ್ತಂಗಡಿ: ಶ್ರೀ ಧ. ಆಂ.ಮಾ. ಶಾಲೆಯಲ್ಲಿ ಭಾರತ್ ಸ್ಕೌಟ್ ಗೈಡ್ ನ‌ ಶ್ರೀ ಮಂಜುನಾಥ ದಳದಿಂದ ವಿಶ್ವ ಚಿಂತನಾ ದಿನಾಚರಣೆ

0

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯ ಕಬ್ ಬುಲ್ ಬುಲ್ , ಸ್ಕೌಟ್ ಗೈಡ್ ನ ಶ್ರೀ ಮಂಜುನಾಥ ದಳದಿಂದ ವಿಶ್ವ ಚಿಂತನ ಹಾಗೂ ವಿಶ್ವ ಭಾತೃತ್ವ ದಿನಾಚರಣೆಯನ್ನು ಆಚರಿಸಲಾಯಿತು. ಭಾರತ್ ಸ್ಕೌಟ್ ಗೈಡ್ ಧ್ವಜಾರೋಹಣದೊಂದಿಗೆ ಪ್ರಾರಂಭಿಸಿ, ಸರ್ವಧರ್ಮ ಪ್ರಾರ್ಥನೆಯನ್ನು ಮಾಡಿದರು. ಕಬ್ ಬುಲ್ ಬುಲ್ ಸ್ಕೌಟ್ ಗೈಡ್ ಜಾಥದ ಮೂಲಕ ಸ್ಕೌಟ್ ಗೈಡ್ ಜಾಗೃತಿ ಮೂಡಿಸಿದರು. ತದ ನಂತರ ಶಾಲಾ ಪರಿಸರದ ಸ್ವಚ್ಛತೆಯನ್ನು ಮಾಡಿದರು. ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಸ್ಕೌಟ್ ಗೈಡ್ ಸಂಯೋಜಕ ಶಿಕ್ಷಕಿ , ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಸ್ಕೌಟ್ ಗೈಡ್ ನ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಹಾಗೂ ಚಿಂತನ ದಿನಾಚರಣೆಯ ಮಹತ್ವವನ್ನು ಹಾಗೂ ಚಿಂತನ ದಿನಾಚರಣೆಯ ವಿಶೇಷತೆಯನ್ನು ಮಕ್ಕಳಿಗೆ ವಿವರಿಸಿದರು. ಸ್ಕೌಟ್ ಗೈಡ್ ಸೇವೆಗೆ ಸದಾ ಸಿದ್ದರಾಗಿ, ಜೀವನದಲ್ಲಿ ಶಿಸ್ತು, ಮುಂದಾಳತ್ವ ವಹಿಸಿಕೊಳ್ಳುವುದು ಪ್ರತಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳ ಆದ್ಯ ಕರ್ತವ್ಯವೆಂದು ತಿಳಿಸಿದರು.


ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಆಯೋಜನೆಯು ಸ್ಕೌಟ್ ಗೈಡ್ ಶಿಕ್ಷಕಿ , ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ನಿರ್ವಹಿಸಿದರು.

LEAVE A REPLY

Please enter your comment!
Please enter your name here