ಗಂಡಿಬಾಗಿಲಿನಲ್ಲಿ ರೂ. 2.5ಲಕ್ಷ ವೆಚ್ಚದ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ

0

ನೆರಿಯ :ಬೆಳ್ತಂಗಡಿ ತಾಲೂಕಿನ ದುರ್ಗಮ ರಸ್ತೆ ಗಳಿಗೆ ಹೆಸರುವಾಸಿಯಾಗಿರುವ ಗಂಡಿಬಾಗಿಲಿನ ನೆರಿಯ ಕಾಡ್ ಪ್ರದೇಶದಲ್ಲಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ 2.5 ಲಕ್ಷ ರೂಪಾಯಿ ವೆಚ್ಚದ ಸರ್ವ ಋತು ರಸ್ತೆಯ ನಿರ್ಮಾಣಕ್ಕೆ ಇಂದಿಲ್ಲಿ ಸ್ಥಳೀಯ ಗಂಡಿಬಾಗಿಲಿನ ಧರ್ಮಗುರುಗಳು ಹಾಗೂ ಕೆ ಎಸ್ ಎಂ ಸಿ ಎ ನಿರ್ದೇಶಕ ವಂ. ಶಾಜಿ ಮಾತ್ಯು ಚಾಲನೆ ನೀಡಿದರು.

ಇರುವಂತಹ ಸರಕಾರಿ ಅನುದಾನ ವನ್ನು ಫಲದಾಯಕ ವಾಗಿ ಕಾರ್ಯರೂಪಕ್ಕೆ ತರುವಂತಹ ಕೆಲಸ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರ ಮುಖಾಂತರ ಆಗಬೇಕಾಗಿದೆ ಎಂದು ತಿಳಿಸಿದರು. ಪಂಚಾಯತ್ ಸದಸ್ಯರಾದ ತೋಮಸ್ ವಿ ಡಿ ಹಾಗೂ ಶ್ರೀಮತಿ ಜೆಸ್ಸಿ ಇವರ ಪ್ರಯತ್ನವನ್ನು ಶ್ಲಾಘಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಸೇಬಾಸ್ಟಿನ್ ವಿ.ಟಿ, ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಸಂತಿ, ಉಪಾಧ್ಯಕ್ಷೆ ಶ್ರೀಮತಿ ಕುಶಲ, ಸದಸ್ಯ ಸಚಿನ್, ಗುತ್ತಿಗೆದಾರ ಬಿಜು , ಸ್ಥಳೀಯರಾದ ಜೋಬಿನ್ಸ್ ವಿಲ್ಸನ್, ಟೊಮಿ, ದೇವಸ್ಯ ಕಿರಣ್ ಸೇಬಾಸ್ಟಿನ್, ಸಾನೋಜ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here