ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಶನ್ ಕಕ್ಕಿಂಜೆ ವಲಯ ಸಮಿತಿಯ ಮಹಾಸಭೆ

0

ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಶನ್ ಕಕ್ಕಿಂಜೆ ವಲಯ ಸಮಿತಿಯ ಮಹಾಸಭೆಯು ಇತ್ತೀಚೆಗೆ ಮುಂಡಾಜೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಕ್ಕಿಂಜೆ ವಲಯದ ಅಧ್ಯಕ್ಷರಾದ ವಿನಯಚಂದ್ರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿ ಕುಶಾಲಪ್ಪ ಗೌಡ, ಭಾಗವಹಿಸಿ ಜಿಲ್ಲಾ ಸಮಿತಿಯ ವತಿಯಿಂದ ಇದೇ ಬರುವ ಮಾರ್ಚ್ 7 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಟೈಲರ್ ದಿನಾಚರಣಾ ಕಾರ್ಯಕ್ರಮ ಕ್ಕೆ ತಾಲೂಕಿನ ಎಲ್ಲಾ ಸದಸ್ಯರೂ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು. ವೇದಿಕೆಯಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷೆ ವೇದಾವತಿ ಜನಾರ್ಧನ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ನಾಗೇಶ್ ಕುಮಾರ್, ಉಜಿರೆ ಕ್ಷೇತ್ರ ಕೋಶಾಧಿಕಾರಿ ಜಯ ಚಿದಾನಂದ ವಲಯದ ಕಾರ್ಯದರ್ಶಿ ಅನ್ವರ್ ಕಕ್ಕಿಂಜೆ ಖಜಾಂಚಿ, ಆಶಾ ರಾಣಿ ಉಪಸ್ಥಿತರಿದ್ದರು.

ಕ್ಷೇತ್ರ ಹಾಗೂ ವಲಯ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಟೈಲರ್ ತಿಮ್ಮಯ್ಯ ಗೌಡ ಕಾನರ್ಪ ,ನಾರಾಯಣ ಗೌಡ ಸೋಮಂತಡ್ಕ ,ಭುವನೇಶ್ವರಿ ನೆರಿಯ ಇವರನ್ನು ಸನ್ಮಾನಿಸಲಾಯಿತು ಮತ್ತು ಹೊಸ ಸಮಿತಿಯನ್ನು ರಚನೆ ಮಾಡಲಾಯಿತು. ವಲಯ ಸಮಿತಿ ಯ ಸದಸ್ಯರಾದ ಸುಮಂಗಲಾ, ಆಶಾ ರಾಣಿ ಪ್ರಾರ್ಥನೆ ಸಲ್ಲಿಸಿದರು. ಯಶೋಧರ ಕಾನರ್ಪ ಸ್ವಾಗತಿಸಿದರು.

LEAVE A REPLY

Please enter your comment!
Please enter your name here