ಬೆಳಾಲಿನಲ್ಲಿ ಅಣಬೆ ಕೃಷಿ ತರಬೇತಿ ಕಾರ್ಯಾಗಾರ

0


ಬೆಳಾಲು : ಬೆಳ್ತಂಗಡಿ ತಾಲೂಕು ಕೃಷಿ ಇಲಾಖೆಯ ಕೊಕ್ಕಡ ರೈತ ಸಂಪರ್ಕ ಕೇಂದ್ರದ ಆತ್ಮ ಯೋಜನೆಯ ವತಿಯಿಂದ ಫೆ. 17 ರಂದು ಬೆಳಾಲು ಶ್ರೀ ಅನಂತಪದ್ಮನಾಭ ದೇವಸ್ಥಾನದ ವಠಾರದಲ್ಲಿ “ಗೊಂಚಲು ಸ್ತ್ರೀ ಶಕ್ತಿ ಒಕ್ಕೂಟ, ಬೆಳಾಲು” ಹಾಗೂ “ಶ್ರೀ ಅನಂತಪದ್ಮನಾಭ ಮಹಿಳಾ ಸಮಿತಿ, ಅನಂತೋಡಿ, ಬೆಳಾಲು” ಇವರ ಸಹಯೋಗದಲ್ಲಿ ಅಣಬೆ ಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು.


ತರಬೇತಿದಾರರಾಗಿ ಸುಲೈಮಾನ್ ಬೆಳಾಲು ರವರು ಅಣಬೆ ಕೃಷಿಯ ಬಗ್ಗೆ ವಿವರವಾದ ಮಾಹಿತಿ ನೀಡಿ ಪ್ರಾಯೋಗಿಕವಾಗಿ ಅಣಬೆ ಬ್ಯಾಗ್ ಮಾಡಿ ತೋರಿಸಿದರು.
ಕೃಷಿ ಇಲಾಖೆ ಕೊಕ್ಕಡ ರೈತ ಸಂಪರ್ಕ ಕೇಂದ್ರದ ಕೃಷಿ ಸಹಾಯಕಿ ಚಂದ್ರಕಲಾ, ಗೊಂಚಲು ಸ್ತ್ರೀ ಶಕ್ತಿ ಒಕ್ಕೂಟ ಬೆಳಾಲಿನ ಅಧ್ಯಕ್ಷೆ ಶ್ರೀಮತಿ ನಿಶಾ ಬನಂದೂರು ಹಾಗೂ ಶ್ರೀ ಅನಂತಪದ್ಮನಾಭ ದೇವಸ್ಥಾನದ ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಹಾಗೂ ಬೆಳಾಲು ಗ್ರಾ. ಪಂ. ಸದಸ್ಯೆ ಶ್ರೀಮತಿ ವಿದ್ಯಾ ಶ್ರೀನಿವಾಸ್ ಹಾಗೂ ಬೆಳಾಲಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು ಹಾಗೂ ಊರಿನ ರೈತ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೊಲ್ಪಾಡಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲೀಲಾ ಎಸ್. ಸ್ವಾಗತಿಸಿದರು. ಶ್ರೀಮತಿ ವಿದ್ಯಾ ಉಚಿತ ಅಣಬೆ ತರಬೇತಿ ಕಾರ್ಯಕ್ರಮದ ಅಗತ್ಯ ಮತ್ತು ಅದರಿಂದ ಗ್ರಾಮಸ್ಥರು ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಮಾಯ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲೋಕಮ್ಮ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here