ಮುಂಡಾಜೆ: 15 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟ ಕಕ್ಕಿಂಜೆಯ ಸ್ನೇಕ್ ಅನಿಲ್

0

ಮುಂಡಾಜೆ: ಕಳೆದ ಒಂದು ವಾರದಿಂದ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಸೀಟು ಪರಿಸರದ ಅಲ್ಲಲ್ಲಿ ಕಂಡು ಬರುತ್ತಿದ್ದ ಸುಮಾರು 15ಅಡಿ ಉದ್ದದ ಹೆಬ್ಬಾವನ್ನು ಕಕ್ಕಿಂಜೆಯ ಸ್ನೇಕ್ ಅನಿಲ್ ಹಿಡಿದು ರಕ್ಷಿಸಿ ಕಾಡಿಗೆ ಬಿಟ್ಟರು.

ಈ ಸಂದರ್ಭದಲ್ಲಿ ಮುಂಡಾಜೆ ಗ್ರಾಪಂ ಸದಸ್ಯ ಜಗದೀಶ್ ನಾಯ್ಕ್, ಗ್ರಾಮಸ್ಥರಾದ ವಿಶ್ವನಾಥ ಬೆಂಡೆ, ನರಸಿಂಹ ಪ್ರಭು, ಈಶ್ವರ ನಾಯ್ಕ, ಬಾಬು ಗೌಡ, ಪುಟ್ಟ ಮೂಲಾರು ಮತ್ತಿತರರು ಇದ್ದರು.
ಸಾರ್ವಜನಿಕವಾಗಿ ಭಯ ಹುಟ್ಟಿಸಿದ್ದ ಈ ಹಾವು, ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಹಾಗೂ ಶಿವರಾತ್ರಿ ಪಾದಯಾತ್ರಿಗಳಿಗೆ ಸಮಸ್ಯೆ ಆಗಿತ್ತು.

LEAVE A REPLY

Please enter your comment!
Please enter your name here