ಅಳದಂಗಡಿ: ಡೊಂಕುಬೆಟ್ಟು ಕುಟುಂಬಸ್ಥರಿಂದ ಮಹಾಗಣಪತಿ ದೇವಸ್ಥಾನಕ್ಕೆ ಬಾಗಿಲುಗಳ ಸಮರ್ಪಣೆ

0

ನಾರಾವಿ: ಡೊಂಕುಬೆಟ್ಟು ಸನ್ನಿಧಿ ಪ್ಯಾಲೇಸ್ ನ ವೀರಮ್ಮ ಸಂಜೀವ ಸಾಲಿಯಾನ್ ಮತ್ತು ಮಕ್ಕಳಿಂದ ದೇವಸ್ಥಾನದ ಪೂರ್ವದ ಪ್ರಧಾನ ಬಾಗಿಲು, ಉತ್ತರದ ಬಾಗಿಲು,ಗರ್ಭಗುಡಿಯ ಬಾಗಿಲು ಮತ್ತು ಎಡನಲ್ಲಿಯ ಬಾಗಿಲುಗಳುಗಳನ್ನು ಮೆರಮಣಿಗೆಯ ಮೂಲಕ ದೇವಸ್ಥಾನಕ್ಕೆ ಸಮರ್ಪಣೆ ಮಾಡಿದರು.

ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು, ಜಿರ್ಣೋದ್ದಾರ ಸಮಿತಿ ಅಧ್ಯಕ್ಷ ಶಶಿಧರ ಡೋಂಗ್ರೆ, ಬ್ರಹ್ಮಕಲಶೋತ್ಸವ ಕಾರ್ಯಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು, ಪ್ರ.ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ,ಸ್ವಾಗತ ಸಮಿತಿ ಅದ್ಯಕ್ಷ ಶಿವಪ್ರಸಾದ್ ಅಜಿಲ, ಪ್ರಮುಖರಾದ ಯೋಜನೆಯ ಯೋಜನಾಧಿಕಾರಿ ಯಶವಂತ್ ಎಸ್, ಪಿ.ಹೆಚ್.ನಿತ್ಯಾನಂದ ಶೆಟ್ಟಿ, ಹರೀಶ್ ಆಚಾರ್ಯ,ಜಗನ್ನಾಥ ಶೆಟ್ಟಿ, ಸೋಮನಾಥ ಬಂಗೇರ ವರ್ಪಾಳೆ, ಶಿವ ಭಟ್ ಅಳದಂಗಡಿ, ವಿಶ್ವನಾಥ ಹೊಳ್ಳ, ನಿರಂಜನ್ ಜೋಶಿ, ಸುಧೀರ್ ಸುಲ್ಕೇರಿ ಹಾಗೂ ಎಲ್ಲಾ ಸಮಿತಿ ಸದಸ್ಯರು, ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here