ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಮಹಿಳಾ ವಿಭಾಗದಿಂದ “ಕ್ಷೇಮ” ಆರೋಗ್ಯ ಮಾಹಿತಿ ಕಾರ್ಯಕ್ರಮ

0

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಮಹಿಳಾ ವಿಭಾಗದಿಂದ “ಕ್ಷೇಮ” ಮಹಿಳೆಯರ ಆರೋಗ್ಯ ಮಾಹಿತಿ ಕಾರ್ಯಕ್ರಮವು ಜ.29 ರಂದು ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದಲ್ಲಿ ಹಮ್ಮಿಕೊಳ್ಳಲಾಯಿತು.

ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಜೆಸಿಐನ ವಲಯ ತರಬೇತುದಾರರಾದ ಜೇಸಿ ಸುಭಾಷಿಣಿ ಮಹಿಳೆಯರ ಆರೋಗ್ಯ ಕಾಪಾಡುವ ಕುರಿತು ಮಾಹಿತಿ ನೀಡಿದರು. ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಲೇಡಿ ಜೇಸಿ ಸಂಯೋಜಕಿ ಜೇಸಿ ಮಮಿತಾ ಸುಧೀರ್ ಅಧ್ಯಕ್ಷತೆ ವಹಿಸಿದ್ದರು. ಊರಿನ ಮಹಿಳೆಯರಿಗೆ ಹಾಗೂ ಹದಿಹರೆಯದ ಮಕ್ಕಳಿಗೆ ಆರೋಗ್ಯ ಕಿಟ್ ವಿತರಿಸಲಾಯಿತು.

ಮುಖ್ಯ ಅತಿಥಿಯಾಗಿ ಸುಖಲತಾ ಆರ್ ರೈ ಉರುವಾಲುಪದವು ಪಾಲ್ಗೊಂಡಿದ್ದರು, ಜೆಸಿಐ ಬೆಳ್ತಂಗಡಿಯ ಅಧ್ಯಕ್ಷರಾದ ಜೇಸಿ ಶಂಕರ್ ರಾವ್, ನಿಕಟ ಪೂರ್ವ ಅಧ್ಯಕ್ಷರಾದ ಜೇಸಿ ಪ್ರಸಾದ್ ಬಿ. ಎಸ್ ಉಪಸ್ಥಿತರಿದ್ದರು. ಘಟಕದ ಪೂರ್ವಧ್ಯಕ್ಷರಾದ ಜೇಸಿ ನಾರಾಯಣ ಶೆಟ್ಟಿ,ಘಟಕದ ಉಪಾಧ್ಯಕ್ಷ ಪ್ರೀತಮ್ ಶೆಟ್ಟಿ,ಸದಸ್ಯರುಗಳಾದ ಶೈಲೇಶ್, ಸೃಷ್ಟಿ ಆರ್ ರೈ ಭಾಗವಹಿಸಿದ್ದರು.

ಘಟಕದ ಉಪಾಧ್ಯಕ್ಷೆ ಜೇಸಿ ಹೇಮಾವತಿ ಸ್ವಾಗತಿಸಿದರು. ಜೇಸಿ ಸೃಜನ್ ಆರ್ ರೈ ಜೆಸಿ ವಾಣಿ ವಾಚಿಸಿದರು, ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಜೇಸಿ ಘಟಕದ ಉಪಾಧ್ಯಕ್ಷೆ ಆಶಾಲತಾ ಪ್ರಶಾಂತ್ ವಾಚಿಸಿದರು. ಘಟಕದ ಕಾರ್ಯದರ್ಶಿ ಸುಧೀರ್ ಕೆ. ಎನ್ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here