ಶ್ರೀ ವನದುರ್ಗಾ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಶ್ರೀ ರಕ್ತೇಶ್ವರಿ ಸಹ ಪರಿವಾರ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ

0

ಉಜಿರೆ: ಶ್ರೀ ವನದುರ್ಗಾ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಶ್ರೀ ರಕ್ತೇಶ್ವರಿ ಸಹ ಪರಿವಾರ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇಂದು ಜ.26ರಂದು ನಡೆಯಿತು.

ಗಣಪತಿ ಹೋಮ, ಪ್ರತಿಷ್ಠ ಹೋಮ, ಮೀನ ಲಗ್ನ ದಲ್ಲಿ ಶ್ರೀ ವನದುರ್ಗಾ ಪ್ರತಿಷ್ಠ ಬ್ರಹ್ಮಕಲಶೋತ್ಸವ ಶ್ರೀ ರಕ್ತೇಶ್ವರಿ,ಮಹಿಸಂದಾಯ, ಕಲ್ಲುರ್ಟಿ, ಪಂಜುರ್ಲಿ, ಗುಳಿಗ ದೈವ ಗಳ ಪುನಾ ಪ್ರತಿಷ್ಠಾ ಕಲಶೋತ್ಸವ, ಪ್ರಸನ್ನ ಪೂಜೆ, ದೈವಗಳಿಗೆ ಪನಿವಾರ ಸೇವೆ, ನಡೆಯಿತು.

ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಡಾ. ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಡಿ. ಹರ್ಷೇಂದ್ರ ಕುಮಾರ್ ರವರ ಸಹಕಾರ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶೀಯ ಆಡಳಿತ ಮೊತ್ತೇಸರ ಯು. ವಿಜಯರಾಘವ ಪಡೆಟ್ನಾಯ ರವರ ಮಾರ್ಗದರ್ಶನದಲ್ಲಿ, ದೈವಜ್ಞರಾದ ಸುರತ್ಕಲ್ ನಾಗೇಂದ್ರ ಭರದ್ವಾಜರು, ಪ್ರಧಾನ ಅರ್ಚಕ ವೇ ಮೂ। ರಾಜಗೋಪಾಲ ಯಡಪಡಿತ್ತಾಯ, ಊರ ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡುಪೆಟ್ನಾಯ, ಅನಂತ್ ಮೋಹನ್ ರಾವ್ ಮೂ ಡೋಟ್ಟು, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಕಲ್ಮಂಜ ಗ್ರಾಮ ಪಂಚಾಯತ್‌ ಅಧ್ಯಕ್ಷ ಶಶಿಧರ್, ಶ್ರೀಮತಿ ಲೀಲಾವತಿ ರಾಜು ಮೇಸ್ತ್ರಿ, ಮೋಹನ್ ಕುಮಾರ್, ರೇಷ್ಮಾ, ಮೌಲ್ಯ, ಮಾನ್ವಿ, ರವಿ ಕುಮಾರ್ ಕುಟುಂಬಸ್ಥರು, ಪ್ರಕಾಶ್ ಮತ್ತು ಕುಟುಂಬಸ್ಥರು, ಶ್ರಿಮತಿ ಜಯಂತಿ ಮಹೇಶ್ ಕುಟುಂಬಸ್ಥರು, ರಾಜೇಶ್ ಪೈ, ಲಕ್ಷ್ಮಣ್‌ ಸಪಲ್ಯ, ರವಿ ಚಕ್ಕಿತಾಯ, ಜಯಪ್ರಕಾಶ್‌ ಶೆಟ್ಟಿ, ವೆಂಕಟೇಶ್‌ ಶೆಟ್ಟಿ, ನಾಗರಾಜ್, ಭರತ್, ರಾಘವೇಂದ್ರ, ತಿಮ್ಮಯ, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here