ಬೆಳ್ತಂಗಡಿ: ಸ.ಪ.ಪೂ. ಕಾಲೇಜಿಗೆ ಪ್ರೇಮಾ ರತ್ನಾಕರ ಅಜ್ರಿಯವರಿಂದ ಶುದ್ಧ ನೀರಿನ ಘಟಕ ಕೊಡುಗೆ

0

ಬೆಳ್ತಂಗಡಿ : ಸರಕಾರಿ ಪದವಿ ಪೂರ್ವ ಕಾಲೇಜಿಗೆ ಇಲ್ಲಿಯ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಮಹಾವೀರ ಸರ್ವಿಸ್ ಸ್ಟೇಷನ್ ಇಂಡಿಯನ್ ಆಯಿಲ್ ಲಿಮಿಟೆಡ್ ಹಳೆಕೋಟೆ, ಬೆಳ್ತಂಗಡಿ ಇದರ ಮಾಲಕರಾದ ಶ್ರೀಮತಿ ಪ್ರೇಮ ರತ್ನಾಕರ ಅಜ್ರಿ ಇವರು 50,000 ರೂ. ಮೌಲ್ಯದ ಕುಡಿಯುವ ಶುದ್ಧ ನೀರಿನ ಘಟಕ ( ವಾಟರ್ ಪ್ಯೂರಿಫೈಯರ್ )ನ್ನು ಕೊಡುಗೆಯಾಗಿ ನೀಡಿದ್ದಾರೆ.

ಇವರನ್ನು ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಲು ಹೊದಿಸಿ ಪ್ರಾಚಾರ್ಯರಾದ ಸುಕುಮಾರ ಜೈನ್ ಸನ್ಮಾನಿಸಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here