ಬಂಗಾಡಿ ನಾಗಬ್ರಹ್ಮಲಿಂಗೇಶ್ವರ ದೇವರ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ಮಹಾಗಣಪತಿ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲೋತ್ಸವ

0

ಬಂಗಾಡಿ ನಾಗಬ್ರಹ್ಮಲಿಂಗೇಶ್ವರ ದೇವರ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ಮಹಾಗಣಪತಿ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲೋತ್ಸವ ಸಹಸ್ರನಾಗಬನದಲ್ಲಿ ಜ.23 ರಂದು ಸಂಜೆ ಕಾರ್ಯಾಲಯ ಉದ್ಘಾಟನೆಯನ್ನು ಜನಾರ್ಧನ ಸ್ವಾಮಿ ದೇವಸ್ಥಾನ ಆಡಳಿತ ಮೊಕ್ತೇಸರರು ಶರತ್ ಕೃಷ್ಣ ಪಡ್ವೆಟ್ನಾಯ ಉದ್ಘಾಟಿಸಿದವರು.

ಉಗ್ರಾಣ ಉದ್ಘಾಟನೆಯನ್ನು ಧರ್ಮಸ್ಥಳ ಭುಜಬಲಿ, ಭಜನಾ ಕಾರ್ಯಕ್ರಮ ಉದ್ಘಾಟನೆಯನ್ನು ಆನಂದ ಅಡಿಲು, ಹಸಿರು ವಾಣಿ ಹೊರೆ ಕಾಣಿಕೆ ಮೋಹನ್ ರಾವ್ ಕಲ್ಮಂಜ, ಅನ್ನ ಛತ್ರದ ಉದ್ಘಾಟನೆಯನ್ನು ರಾಜಶೇಖರ ಅಜ್ರಿ, ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟಣೆಯನ್ನು ಡಾ. ಶಿವರಾಜ್ ಪಜಿಲ ಬಂಗಾಡಿ ರವರು ನೆರವೇರಿಸಿದರು. ಹಾಗೂ ಸಂಜೆ ಸಭಾ ಕಾರ್ಯಕ್ರಮವು ನಡೆಯಿತು.

ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣಾ ಕಾರ್ಯದಲ್ಲಿ ಮಲವಂತಿಗೆ, ಮಿತ್ತ ಬಾಗಿಲು, ಕಡಿರುದ್ಯಾವರ, ಇಂದ ಬೆಟ್ಟು,ನಾವೂರು, ನಡ, ಕನ್ಯಾಡಿ ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

ಈ ಸಂದರ್ಭದಲ್ಲಿ ಯಶೋಧರ ಬಳ್ಳಾಲ್, ಡಾ. ಪ್ರದೀಪ್, ತಿಮ್ಮಪ್ಪ ಗೌಡ ಬೆಳಾಲು, ಭಾಸ್ಕರ ಧರ್ಮಸ್ಥಳ, ಲಕ್ಷ್ಮಣಗೌಡ, ಎನ್, ಪಳನಿ ಸ್ವಾಮಿ, ನವೀನ್ ಜೈನ್, ಅಮಿತಾ ಆನಂದ ಹೆಗಡೆ, ಅಜಿತ್ ಕುಮಾರ್ ಆರಿಗ, ಸೂರ್ಯನಾರಾಯಣ ಭಟ್, ರಮಾನಂದ ಬಂಗಾಡಿ, ಧನಂಜಯ ಅಜ್ವಿ, ದಿನೇಶ್ ಚಾರ್ಮಾಡಿ, ಹರೀಶ್ ಸಾಲಿಯಾನ್, ವೆಂಕಪ್ಪ ಮೂಲ್ಯ ನಿರ್ಮಾಳ, ಅದಲ್ಲದೆ ಎಲ್ಲಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here