ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 17ನೇ ಶಾಖೆ ಅಜೆಕಾರಿನಲ್ಲಿ ಶುಭಾರಂಭ

0

ಬೆಳ್ತಂಗಡಿ :ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘ ಪ್ರಧಾನ ಕಚೇರಿ ಬೆಳ್ತಂಗಡಿ ಇದರ 17ನೇ ಶಾಖೆ ಅಜೆಕಾರು ಕೆಮ್ಮು0ಜೆ ಕ್ಲಾಕ್ ಟವರ್ ಕಾಂಪ್ಲೆಕ್ಸ್ ನಲ್ಲಿ ಡಿ.31 ರಂದು ಶುಭಾರಂಭಗೊಂಡಿತು.
ಬೆಳ್ತಂಗಡಿ ಮಾಜಿ ಶಾಸಕ ಸಂಘದ ನಿರ್ದೇಶಕ ಕೆ.ವಸಂತ ಬಂಗೇರ ಉದ್ಘಾಟಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜ ವಹಿಸಿದ್ದರು. ಭದ್ರತಾ ಕೊಠಡಿಯನ್ನು ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಾಂತಿರಾಜ್ ಜೈನ್, ಭದ್ರತಾ ಕೋಶವನ್ನು ಮರ್ಣೆ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಜ್ಯೋತಿ, ಗಣಕಯಂತ್ರವನ್ನು ಜನಪ್ರಿಯ ರೈಸ್‌ಮಿಲ್‌ನ ಮಂಜುನಾಥ, ಇ ಸ್ಟ್ಯಾಂಪ್ ವಿಭಾಗವನ್ನು ತಾ.ಪಂ. ಮಾಜಿ ಉಪಾಧ್ಯಕ್ಷ ಹರೀಶ್ ನಾಯಕ್ ಉದ್ಘಾಟಿಸಿದರು. ನಿರಖು ಠೇವಣಿ ಸರ್ಟಿಫಿಕೇಟ್ ವಿತರಣೆಯನ್ನು ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ರತ್ನಾಕರ ಅಮೀನ್ ಹಾಗೂ ಉಳಿತಾಯ ಖಾತೆ ಪುಸ್ತಕ ವಿತರಣೆಯನ್ನು ಅಜೆಕಾರು ಬಿಲ್ಲವ ಸಮಾಜ ಸೇವಾ ಸಂಘದ ನಾರಾಯಣ ಪೂಜಾರಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಸಂಜೀವ ಪೂಜಾರಿ, ಜಗದೀಶ್ಚಂದ್ರ ಡಿ.ಕೆ, ಚಂದ್ರಶೇಖರ್, ಕೆ ಪಿ ದಿವಾಕರ್, ಶ್ರೀಮತಿ ತನುಜ ಶೇಖರ್, ಗಂಗಾಧರ ಮಿತ್ತಮಾರ್, ಧರಣೇಂದ್ರ ಕುಮಾರ್, ಸಂಘದ ವಿಶೇಷ ಅಧಿಕಾರಿ ಎಂ ಮೋನಪ್ಪ ಪೂಜಾರಿ ಕಂಡೆತ್ಯಾರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್, ಅಜೆಕಾರು ಶಾಖೆಯ ಶಾಖಾ ವ್ಯವಸ್ಥಾಪಕ ಅಕ್ಷಯ್, ಶಿರ್ಲಾಲು ಗ್ರಾ. ಪಂ. ಅಧ್ಯಕ್ಷ ರಮಾನಂದ ಪೂಜಾರಿ, ಯೋಗಕ್ಷೇಮ ಫೈನಾನ್ಸ್ ನ ನಂದಕುಮಾರ್ ಹೆಗ್ಡೆ, ಅಜೆಕಾರು ಮೀನಾ ಲಾಡ್ಜ್ ನ ಸುಂದರ್ ಶೆಟ್ಟಿ, ಶಿರ್ಲಾಲು ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಪೂಜಾರಿ, ಕಟ್ಟಡ ಮಾಲೀಕರಾದ ಅಲೆಕ್ಸ್ ಡಿಸೋಜ, ಅಜೆಕಾರು ಮಂಜುಶ್ರೀ ಭಜನಾ ಮಂಡಳಿಯ ಅಧ್ಯಕ್ಷ ತೌಡ, ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಪ್ರಶಾಂತ್ ಶೆಟ್ಟಿ ಕುಂಠಿನಿ, ಶಂಕರ ಪೂಜಾರಿ ಅಪ್ಪಾಯಿ ಬೆಟ್ಟು ಹೆರ್ಮುಂಡೆ, ಗುರುಪ್ರಸಾದ್ ಶೆಟ್ಟಿ ಸುದಣ್ಣ ರೆಸಿಡೆನ್ಸಿ ಅಜೆಕಾರು, ಚಂದ್ರಶೇಖರ್ ನಾಯಕ್ ಹಂಚಿಕಟ್ಟೆ ಎಣ್ಣೆಹೊಳೆ, ಕಿಶೋರ್ ಕೋಟ್ಯಾನ್ ಅಜೆಕಾರು, ತಾರನಾಥ ಪೂಜಾರಿ ಉದ್ಯಮಿ ನೀಲ್ ಕಮಲ್ ಹೋಟೆಲ್ ಉಡುಪಿ, ಎಳ್ಳಾರೆ ಪಂಚಾಯತ್ ಉಪಾಧ್ಯಕ್ಷ ಸತೀಶ್ ಪೂಜಾರಿ, ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ ಆರ್ ರಾಜು, ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೆಶಕರಾದ ಶ್ರೀಮತಿ ವಿದ್ಯಾಪೈ ಅಜೆಕಾರು, ಕಟೀಲ್ ಹೋಟೆಲ್‌ನ ನವೀನ್ ಎಸ್ ಶೆಟ್ಟಿ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರೀಶ್ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here