ಪೆರಾಡಿ: ಸ. ಹಿ. ಪ್ರಾ. ಶಾಲೆಗೆ ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಮಂಜೂರಾತಿ ಪತ್ರ ಹಸ್ತಾಂತರ

0

ಪೆರಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ನಾರಾವಿ ವಲಯ ವತಿಯಿಂದ ಪೆರಾಡಿ ಮಾವಿನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳ್ಳಿ ಹಬ್ಬದ ಪ್ರಯುಕ್ತ ಶಾಲೆಯ ಕಾಮಗಾರಿಗೆ ಕ್ಷೇತ್ರದ ವತಿಯಿಂದ ಮಂಜೂರಾದ ರೂ.1.50 ಲಕ್ಷ ಮಂಜೂರಾತಿ ಪತ್ರವನ್ನ ಯೋಜನೆಯ ಆನಂದ ಸುವರ್ಣ, ಪ್ರಾದೇಶಿಕ ನಿರ್ದೇಶಕ ಸಮುದಾಯ ವಿಭಾಗ ಧರ್ಮಸ್ಥಳ ಪುಷ್ಪ ರಾಜ್ ಯೋಜನಾಧಿಕಾರಿ ಸಮುದಾಯ ವಿಭಾಗ ಹಾಗೂ ಮಾನ್ಯ ಯೋಜನಾ ಅಧಿಕಾರಿ ಯಶ್ವಂತ್ ಇವರುಗಳು ಶಾಲೆಯ ಮುಖ್ಯ ಶಿಕ್ಷಕರಿಗೆ ಮಂಜೂರಾತಿ ಪತ್ರ ನೀಡಿದರು.

ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಹರೀಶ್ ಹಾಗೂ ಎ ಬಿ ಒಕ್ಕೂಟ ಸೇವಾಪ್ರತಿನಿಧಿ ಮಮತಾ, ಸುನೀತ, ಒಕ್ಕೂಟ ಅಧ್ಯಕ್ಷ ರಾಜೇಶ್ ವನಿತಾ ಶಾಲೆಯ ಎಲ್ಲಾ ಶಿಕ್ಷಕರೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here