ವಿವೇಕ್ ಬಂಗೇರ ವಂಜಾರೆಯವರಿಗೆ ಶ್ರದ್ಧಾಂಜಲಿ ಸಭೆ

0

ನ್ಯಾಯತರ್ಪು : ಇತ್ತೀಚಿಗೆ ನಿಧನರಾದ ವಿವೇಕ್ ಬಂಗೇರ ಎನ್, ವಂಜಾರೆ ಅವರ ಶ್ರದ್ಧಾಂಜಲಿ ಸಭೆ ಜ.3 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವವದಲ್ಲಿ ನಡೆಯಿತು.
ಸಾಧು ಸಜ್ಜನ ಸ್ವಭಾವದ, ದೈವ ಭಕ್ತರು, ಕೊಡಗೈದಾನಿಯಾಗಿದ್ದರು. ರಕ್ತೇಶ್ವರಿಪದವು ಶಾಲೆ, ಅಂಗನವಾಡಿ, ಭಜನಾ ಮಂಡಳಿ ದೇವಸ್ಥಾನಗಳಲ್ಲಿ, ಸಮಾಜ ಸೇವೆಗಳ ಮೂಲಕ ಸಕ್ರಿಯವಾಗಿದ್ದು, ಪ್ರಗತಿಪರ ಕೃಷಿಕರಾಗಿದ್ದರು ಎಂದು ಸಂಬಂಧಿಕರು, ಹಿತೈಷಿಗಳು ಗುಣಗಾನವನ್ನು ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದರು.


ಮೃತರ ಪತ್ನಿ ಪ್ರೀಯಾ ವಿವೇಕ್, ಪುತ್ರಿ ಸ್ಪಂದನ, ಪುತ್ರ ಸಮರ್ಥ್, ಸಹೋದರ ಬೆಳ್ತಂಗಡಿ ವಾಕ್‌ಇನ್ ಸ್ಟೈಲ್ ಮಾಲೀಕರಾದ ಜಯರಾಮ ಬಂಗೇರ, ಸಹೋದರಿಯರು, ಕುಟುಂಬದ ಸದಸ್ಯರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here