ವಿಶ್ವ ಹಿಂದೂ ಪರಿಷತ್, ಬಜರಂಗದಳ ರೆಖ್ಯ ಘಟಕದಿಂದ ಸಾಮೂಹಿಕ ಶ್ರೀ ಶನೈ ಶ್ಚ ರ ವೃತ ಕಲ್ಪೊ ಕ್ತ ಪೂಜೆ

0

ವಿಶ್ವ ಹಿಂದೂ ಪರಿಷತ್, ಬಜರಂಗದಳ ರೆಖ್ಯ ಘಟಕ ಇದರ ವತಿಯಿಂದ ಸಾಮೂಹಿಕ ಶ್ರೀ ಶನೈ ಶ್ಚ ರ ವೃತ ಕಲ್ಪೊ ಕ್ತ ಪೂಜೆಯು ರೆಖ್ಯ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ್ ಭಟ್ ಸುಳ್ಯ ಇವರ ಪೌರೋಹಿತ್ಯದಲ್ಲಿ ಡಿ.17ರಂದು ಜರುಗಿತು.

ಸಂಜೆ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷ ತೆಯನ್ನು ರೆಖ್ಯ ವಿ. ಹಿಂ. ಪ. ಭಜರಂಗ ದಳದ ಅಧ್ಯಕ್ಷ ಸುದರ್ಶನ್ ಗೌಡ ವಹಿಸಿದ್ದರು. ಹೈ ಕೋರ್ಟ್ ವಕೀಲರು ಹಾಗೂ ಯುವ ವಾಗ್ಮಿ ಕು. ಸಹನಾ ಸೂಡ ಧಾರ್ಮಿಕ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ವಿ. ಹಿಂ. ಪ. ಬಜರಂಗದಳದ ದಕ್ಷಿಣ ಪ್ರಾಂತ ಕರ್ನಾಟಕದ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ವಿ. ಹಿಂ. ಪ. ಬಜರಂಗದಳದ ಸಹ ಕಾರ್ಯದರ್ಶಿ ನವೀನ್ ನೆರಿಯ, ವಿ. ಹಿಂ. ಪ. ಬಜರಂಗದಳ ಬೆಳ್ತಂಗಡಿ ಪ್ರಖಂಡದ ಗೋ ರಕ್ಷಕ್ ಪ್ರಮುಖ್ ರಮೇಶ್ ಧರ್ಮಸ್ಥಳ ಆಗಮಿಸಿದ್ದರು. ವೇದಿಕೆಯಲ್ಲಿ ರೆಖ್ಯ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ರೈ, ಅಧ್ಯಕ್ಷ ಗಿರಿಯಪ್ಪ ಬಂಗೇರ ಉಪಸ್ಥಿತರಿದ್ದರು.

ಶ್ರದ್ದಾ ಎಸ್. ಭಟ್ ಪ್ರಾರ್ಥಿಸಿದರು. ಅಖಿಲ್ ಸ್ವಾಗತಿಸಿ, ಪ್ರದೀಪ್ ಸಂಪಿಗೆದಡಿ ಧನ್ಯವಾದವಿತ್ತರು. ಯಶೋಧರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಹರೀಶ್ ಪೂಂಜ ಹಾಗೂ ರೆಖ್ಯ ಶ್ರೀ ಗುಡ್ರಮಲ್ಲೇಶ್ವರ ದೇವಸ್ಥಾನ ದ ಅಧ್ಯಕ್ಷ ಮಂಜುನಾಥ ಗೌಡ ಕೈಕುರೆ ದೇವರ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here