ಉಜಿರೆಯಲ್ಲಿ ವ್ಯಾಯಾಮ್ ಮಲ್ಟಿ ಜಿಮ್ ಉದ್ಘಾಟನೆ

0

ಉಜಿರೆ : ಇಲ್ಲಿಯ ಕಾಲೇಜು ರಸ್ತೆ ಮಲ್ಲಿಕಾರ್ಜುನ ಸಂಕೀರ್ಣದಲ್ಲಿ ಎಸ್ ಎಲ್ ವಿ ಸೂಪರ್ ಮಾರ್ಕೆಟ್ ಮೊದಲ ಮಹಡಿಯಲ್ಲಿ ವ್ಯಾಯಮ್ ಮಲ್ಟಿ ಜಿಮ್ ಡಿ.18 ರಂದು ಉದ್ಘಾಟನೆಗೊಂಡಿತು. ಉಜಿರೆ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಆರ್. ಶೆಟ್ಟಿ, ಬೆಳ್ತಂಗಡಿ ನ್ಯಾಯಾವಾದಿ
ಬಿ. ಕೆ. ಧನಂಜಯ ರಾವ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಪಿ. ಹೆಚ್., ಮಲ್ಲಿಕಾರ್ಜುನ ಸಂಕೀರ್ಣದ ಮಾಲಕ ಡಿ. ಎಂ. ಗೌಡ ಭಾಗವಹಿಸಿದ್ದರು. ಮಾಲಕ ಶಿಶಿರ್ ರಘುಚಂದ್ರ ಧರ್ಮಸ್ಥಳ, ರಘುಚಂದ್ರ ಟಿ. ಜಿ., ಶ್ರೀಮತಿ ಉಷಾ ರಘುಚಂದ್ರ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

ಡಿ.17 ರಂದು ನಡೆದ ವಾಸ್ತು ಪೂಜಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯ ಹಿರಿಯ ಶಾಖಾಧಿಕಾರಿ ನಾರಾಯಣ ಗೌಡ, ಇನ್ನಿತರ ಗಣ್ಯರು, ಹಿತೈಷಿಗಳು, ಕುಟುಂಬಸ್ಥರು ಆಗಮಿಸಿ ಶುಭ ಕೋರಿದರು.

LEAVE A REPLY

Please enter your comment!
Please enter your name here