ಸಂಗಮ ಕ್ಷೇತ್ರ ಪಜಿರಡ್ಕದಲ್ಲಿ ಉಜಿರೆ -ಕಲ್ಮಂಜ ವಲಯ ಸಮಿತಿ ಕಾರ್ಮಿಕ ಬಂಧುಗಳಿಂದ ಶ್ರಮದಾನ

0

ಪಜಿರಡ್ಕ: ಸಂಗಮ ಕ್ಷೇತ್ರ ಪಜಿರಡ್ಕ ದ ಮಾಗಣೆ ದೇವರಾದ ಶ್ರೀ ಸದಾಶಿವೇಶ್ವರ ದೇವರ ಸನ್ನಿಧಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಭಾರತೀಯ ಮಜ್ದೂರ್ ಸಂಘದ ಕಟ್ಟಡ ಮತ್ತು ಇತರೆ ನಿರ್ಮಾಣ ಮಜ್ದೂರ್ ಸಂಘ ಉಜಿರೆ -ಕಲ್ಮಂಜ ವಲಯ ಸಮಿತಿ ಕಾರ್ಮಿಕ ಬಂಧುಗಳಿಂದ ಶ್ರಮದಾನ ಸೇವೆ ನಡೆಯಿತು.

ಈ ಪುಣ್ಯ ಕಾರ್ಯದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್, ವಲಯ ಸಂಚಾಲಕರಾದ ದಿನೇಶ್ ಗೌಡ, ಕಲ್ಮಂಜ ಗ್ರಾಮ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಗೌಡ ಜೊತೆ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹಾಗೂ ಕಲ್ಮಂಜ-ಉಜಿರೆ ಕಟ್ಟಡ ಕಾರ್ಮಿಕ ಬಂಧುಗಳು ಈ ಪುಣ್ಯ ಶ್ರಮದಾನದಲ್ಲಿ ಪಾಲ್ಗೊಂಡು ಶ್ರೀದೇವರ ಸನ್ನಿಧಿಯಲ್ಲಿ ಶ್ರಮದಾನ ಸೇವೆಗೈದರು ಈ ಸಂದರ್ಭದಲ್ಲಿ ಪಜಿರಡ್ಕ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷರಾದ ಕೃಷ್ಣಪ್ಪ ಗುಡಿಗಾರ್ ಬ್ರಹ್ಮ ಕಳಸ ಸಮಿತಿಯ ಅಧ್ಯಕ್ಷರಾದ ತುಕರಾಮ್ ಸಾಲ್ಯಾನ್, ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ, ಪಾಂಡುರಂಗ ಕಾಕತ್ಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here