ನಾವೂರು: ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮ್ಯಾಟ್ 60 ಕೆಜಿ ವಿಭಾಗ ಮತ್ತು ವಲಯ ಮಟ್ಟದ ಮುಕ್ತ ಬಿಡ್ಡಿಂಗ್ ಕಬಡ್ಡಿ ಪಂದ್ಯಾಟ

0

ನಾವೂರು: ನವೋದಯ ಯುವಕ ಮಂಡಲ(ರಿ) ನಾವೂರು ಮತ್ತು ಅಮೆಚೂರು ದಕ್ಷಿಣ ಕನ್ನಡ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮ್ಯಾಟ್ 60 ಕೆಜಿ ವಿಭಾಗ ಮತ್ತು ವಲಯ ಮಟ್ಟದ ಮುಕ್ತ ಬಿಡ್ಡಿಂಗ್ ಕಬಡ್ಡಿ ಪಂದ್ಯಾಟ ನವೋದಯ ಟ್ರೋಫಿ 2022 ನವೋದಯ ಯುವಕ ಮಂಡಲದ ವಠಾರದಲ್ಲಿ ಡಿ.10 ರಂದು ಜರುಗಿತು.

ವಲಯ ಮಟ್ಟದ ಮುಕ್ತ ಬಿಡ್ಡಿಂಗ್ ಕಬಡ್ಡಿ ಪಂದ್ಯಾಟದ ಉದ್ಘಾಟನೆಯನ್ನು ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ(ನಿ)ಅಧ್ಯಕ್ಷರು ಹರೀಶ್ ಸಾಲ್ಯಾನ್ ಮೊರ್ತಾಜೆ ನೆರವೇರಿಸಿದರು.

ಅಧ್ಯಕ್ಷತೆಯನ್ನು ನವೋದಯ ಯುವಕ ಮಂಡಲ ನಾವೂರು ಅಧ್ಯಕ್ಷರು ಹರೀಶ್ ಕಾರಿಂಜ ವಹಿಸಿದ್ದರು.

ವೇದಿಕೆಯಲ್ಲಿ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ನಾವೂರು ಐಡಿಎಲ್ ಉದ್ಯಮಿ ಸಾಹುಲ್ ಅಮೀದ್, ಬಂಗಾಡಿ ಸಹಕಾರಿ ವ್ಯವಸಾಯ ಸಂಘದ ನಿರ್ದೇಶಕ ಎ.ಬಿ ಉಮೇಶ್ ಅತ್ಯಡ್ಕ, ಜೇಸಿಐ ಭಾರತ ವಲಯ 15 ರ ವಲಯಾಧ್ಯಕ್ಷ ಜೆ ಎಫ್ ಎಮ್ ಸ್ವರೂಪ್ ಶೇಖರ್, ನಾವೂರು ಗ್ರಾ.ಪಂ ಅಧ್ಯಕ್ಷ ಗಣೇಶ್ ನಾವೂರು, ಉದ್ಯಮಿ ಸುರೇಶ್ ಇಂಚರ, ನಾವೂರು ಸ.ಪ್ರೌ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಶೋಕ್,ನಾವೂರು ವಿಪಿ ಆಯಿಲ್ ಮಿಲ್ ನ ಸೆಬಾಸ್ಟಿನ್ ವಿಪಿ,ನಾವೂರು ಹಾ.ಉ ಸ.ಸ ಅಧ್ಯಕ್ಷ ಉಮೇಶ್ ಪ್ರಭು , ನಾವೂರು ಪ್ರಗತಿ ಪರ ಕೃಷಿಕ ವಸಂತ ಪುಜಾರಿ ಇಡ್ಯಾಲ, ನಾವೂರು ಗ್ರಾ.ಪಂ ಸದಸ್ಯ ಬಾಲಕೃಷ್ಣ, ದೇಜಪ್ಪ ಗೌಡ ನಾವೂರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಜತ್ ಮೋರ್ತಾಜೆ ಸ್ವಾಗತಿಸಿದರು. ಸತೀಶ್ ಮನ್ನಡ್ಕ ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಧನ್ಯವಾದ ಗೈದರು.

LEAVE A REPLY

Please enter your comment!
Please enter your name here