ಎಲಿಮಲೆಯ ಅಕ್ಷಯ ಸ್ಟೀಲ್, ಹಾರ್ಡ್ವೇರ್ ಮತ್ತು ಅಟೋವರ್ಕ್ಸ್ ಮತ್ತು ವೆಲ್ಡಿಂಗ್ ಸಂಸ್ಥೆಯಿಂದ ಮಾಲಕ ಹೇಮನಾಥ ಕೋಡ್ತುಗುಳಿಯವರು ಆಯುಧಪೂಜೆಯ ಅಂಗವಾಗಿ ಸುಳ್ಯದ ಸಮನ್ವಯ ಕೇಂದ್ರದ ಇಬ್ಬರು ದಿವ್ಯಾಂಗ ಮಕ್ಕಳಿಗೆ ಫಿಸಿಯೋಥೆರಪಿಗಾಗಿ ಮಂಚಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ರಾಂ ಸುಳ್ಳಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಂದ್ರಶೇಖರ ತಳೂರು, ಸಮನ್ವಯ ಕೇಂದ್ರದ ಶಿಕ್ಷಕಿ ಕೃತಿಕಾ ಗುರುಪ್ರಸಾದ್, ಮಹಾವೀರ ಜೈನ್, ಕೃಷ್ಣಯ್ಯ ಮೂಲೆತೋಟ, ಡಿ.ಟಿ.ದಯಾನಂದ, ರಜನೀಕಾಂತ್ ಉಮ್ಮಡ್ಕ, ಕೇಶವ ಕೋಡ್ತುಗುಳಿ, ಬೆಳಿಯಪ್ಪ ಕೋಡ್ತುಗುಳಿ, ನಾರಾಯಣ ಕೋಡ್ತುಗುಳಿ, ಉದಯ ಟೈಲರ್, ಶ್ರೀಮತಿ ಪ್ರೇಮಾ ಹೇಮನಾಥ ಕೋಡ್ತುಗುಳಿ, ಅಕ್ಷಯ ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿವರ್ಗ ಸೇರಿದಂತೆ ಹಲವರಿದ್ದರು.