ಮೇ.3-5: ನಾರಾವಿ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಧಾಮ ಸಂಪ್ರೋಕ್ಷಣೆ, ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ನಡೆದ ಜೈನ ಶ್ರಾವಕ ಶ್ರಾವಕಿಯರ ರಾಜ್ಯ ಮಟ್ಟದ ಸ್ಪರ್ಧೆಗಳ ಫಲಿತಾಂಶ ಪ್ರಕಟ

0

ನಾರಾವಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ಭ.1008 ಧರ್ಮನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವವು ಮೇ.3ರಿಂದ 5ರವರೆಗೆ ವಿಜೃಂಭಣೆಯಿಂದ ಜರಗಲಿದೆ.

ಈ ಪ್ರಯುಕ್ತ ಜೈನ ಶ್ರಾವಕ, ಶ್ರಾವಕಿಯರಿಗೆ ಆಯೋಜಿಸಿದ ರಾಜ್ಯ ಮಟ್ಟದ ಸ್ಪರ್ಧೆಗಳ ವಿಜೇತರನ್ನು ಆಯ್ಕೆ ಮಾಡಲಾಯಿತು. ವಿಜೇತರ ವಿವರಗಳು ಇಂತಿವೆ:

1. ಧರ್ಮನಾಥ ಸ್ವಾಮಿಯ ಸಂಗೀತ/ಭಜನೆ ಸ್ಪರ್ಧೆ: ಪ್ರಥಮ ಬಹುಮಾನ- ನವೀನ್ ಪ್ರಸಾದ್ ಜಾಂಬ್ಳೆ, ಬೆಂಗಳೂರು. ದ್ವಿತೀಯ ಬಹುಮಾನ- ಸರ್ವಾರ್ಥ್.ಎಸ್.ಜೈನ್ ವೇಣೂರು.

2.ಜೈನ ಧರ್ಮದ ಆಚರಣೆಗಳು ಮತ್ತು ವೈಜ್ಞಾನಿಕತೆ”-ಪ್ರಬಂಧ ಸ್ಪರ್ಧೆ: ಪ್ರಥಮ ಬಹುಮಾನ- ಅಶ್ವಿಕಾ ಜೈನ್, ನೂರಾಳ್ ಬೆಟ್ಟು. ದ್ವಿತೀಯ ಬಹುಮಾನ- ನಾಗರತ್ನ ನಾಗರಾಜ್ ಬೆಂಗಳೂರು.

ನಾರಾವಿ ಬಸದಿಯ ಆಡಳಿತ ಸಮಿತಿ ಹಾಗು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

ವಿಜೇತರನ್ನು ಮೇ.5ರಂದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here