ತೋಟತ್ತಾಡಿ ಪ್ರದೇಶದಲ್ಲಿ ಕಾಡಾನೆಗಳ ದಾಳಿ: ಅಪಾರ ಕೃಷಿ ಹಾನಿ

0

ತೋಟತ್ತಾಡಿ: ಚಾರ್ಮಾಡಿ ಗ್ರಾ.ಪಂ ವ್ಯಾಪ್ತಿಯ, ತೋಟತ್ತಾಡಿ ಗ್ರಾಮದ ಬಾರೆ, ಕುಂಟಾಡಿ, ಮುದ್ದಿನಡ್ಕ ಪ್ರದೇಶಗಳಲ್ಲಿ ಸುಮಾರು ಎರಡು ತಿಂಗಳುಗಳಿಂದ ಕಾಡಾನೆಗಳು ಕೃಷಿಗಳಿಗೆ ಹಾನಿ ಮಾಡುತ್ತಿದ್ದು, ಅಪಾರ ನಷ್ಟ ಉಂಟಾಗಿದೆ.

ಬಾರೆ ನಿವಾಸಿ ದಿವಾಕರ ಗೌಡರ ಅಡಿಕೆ, ತೆಂಗು, ಬಾಳೆ ತೋಟಗಳಿಗೆ ದಾಳಿಮಡಿದ್ದು ಸುಮಾರು ರೂ.50 ಸಾವಿರ ನಷ್ಟವಾಗಿದೆ ಎಂದು ದಿವಾಕರ ಗೌಡ ಮಾಹಿತಿ ತಿಳಿಸಿದ್ದಾರೆ. ಅರಣ್ಯ ಇಲಾಖೆಗೆ ದೂರು ನೀಡಲಾದ ವೇಳೆ ಸ್ಥಳಕ್ಕೆ ಚಾರ್ಮಾಡಿ ವಲಯ ಅರಣ್ಯಾಧಿಕಾರಿ ಭವಾನಿ ಶಂಕರ್ ಹಾಗೂ ಸಿಬ್ಬಂದಿಗಳು ಆನೆ ದಾಳಿ ನಡೆಸಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here