ಆನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಲು ಮನವಿ

0

ಬೆಳ್ತಂಗಡಿ: ಆನೆ ಹಾವಳಿಗೆ ಶಾಶ್ವತ ಪರಿಹಾರ ಹಾಗೂ ಪರಿಹಾರ ಧನವನ್ನು ಒದಗಿಸುವಂತೆ ಧರ್ಮಸ್ಥಳ ಮುಳಿಕ್ಕಾರು-ಬೊಳಿಯಾರು ನಾಗರಿಕರು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗೆ ಮನವಿಯನ್ನು ಸಲ್ಲಿಸಿದರು.

ಧರ್ಮಸ್ಥಳ ಮುಳಿಕ್ಕಾರು-ಬೊಳಿಯಾರು ಪ್ರದೇಶಗಳಲ್ಲಿ ಸುಮಾರು ಕೃಷಿಕರು ವಾಸ ಮಾಡುತ್ತಿದ್ದು ಹಲವು ತಿಂಗಳಿನಿಂದ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದು ಈ ಭಾಗದ ಅನೇಕ ಕೃಷಿಕರ ಭತ್ತ, ಅಡಿಕೆ ತೋಟ, ಬಾಳೆ ಗಿಡಗಳನ್ನು ಕೃಷಿಗಳನ್ನು ನಾಶಮಾಡಿರುತ್ತದೆ. ಇದರಿಂದ ತುಂಬಾ ನಷ್ಟವಾಗಿರುವುದಲ್ಲದೆ ಇದರಿಂದ ಶಾಲಾಮಕ್ಕಳಿಗೆ ಕೂಲಿಕಾರ್ಮಿಕರಿಗೆ ಹಾಗೂ ವಾಹನಸಂಚಾರಕ್ಕೆ ತೊಂದರೆಯಾಗಿರುವ ಕಾರಣ ಆನೆ ಹಾವಳಿಗೆ ಶಾಶ್ವತ ಪರಿಹಾರ ಮತ್ತು ನಷ್ಟವಾಗಿರುವ ಕೃಷಿಕರಿಗೆ ಧನಸಹಾಯವನ್ನು ಒದಗಿಸಿಕೊಡುವಂತೆ ಈ ಭಾಗದ ಜನರ ಒಕ್ಕೊರಳ ಕೋರಿಕೆಯಾಗಿರುತ್ತದೆ ಹಾಗೂ ನೆಲ್ಯಾಡಿ ಬೀಡಿನಿಂದ ಮುಳಿಕ್ಕಾರು-ಕುದ್ರಾಯ ಮುಖ್ಯ ರಸ್ತೆಯ ಬದಿಯಲ್ಲಿರುವ ಅಪಾಯಕಾರಿ ಮರವನ್ನು ತೆರೆವುಗೊಳಿಸಬೇಕಾಗಿ ಮನವಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here