ಶಿರ್ಲಾಲು: ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 22ನೇ ವರ್ಷದ ಮೊಸರು ಕುಡಿಕೆ ಉತ್ಸವ

0

ಶಿರ್ಲಾಲು: ಶಿರ್ಲಾಲು ವಿಶ್ವ ಹಿಂದೂ ಪರಿಷತ್ ಪ್ರಯುಕ್ತ 22ನೇ ವರ್ಷದ ಮೊಸರು ಕುಡಿಕೆ ಉತ್ಸವ ಶಿರ್ಲಾಲು ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ರವಿಚಂದ್ರ ಪೂಜಾರಿ ಸುದೇರ್ದು ಉದ್ಘಾಟಿಸಿ ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಪ್ರಸನ್ನ ಹೆಗ್ಡೆ ಕರಂಬಾರು ಗುತ್ತು ಜಾರಪ್ಪ, ಎಂ.ಎಲ್.ಡಿ ಬ್ಯಾಂಕ್ ನಿರ್ದೇಶಕಿ ಶೀಲಾ ದರ್ಬೆ, ಶಿರ್ಲಾಲು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ನಂದಗೋಕುಲ, ವಿಶ್ವ ಹಿಂದೂ ಪರಿಷತ್ ಶಿರ್ಲಾಲು ಗೌರವಾಧ್ಯಕ್ಷ ಸೋಮನಾಥ ಬಳ್ಳಿದಡ್ಡ, ವಿಶ್ವ ಹಿಂದೂ ಪರಿಷತ್ ಶಿರ್ಲಾಲು ಅಧ್ಯಕ್ಷ ಹರೀಶ್ ಕುಲಾಲ್ ಉಪಸ್ಥಿತರಿದ್ದರು.

ಮಾನ್ವಿತಾ, ಮನಿಷ ಇವರ ಪ್ರಾಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು, ಜ್ಞಾನೆಶ್ ಕುಮಾರ್ ಕಟ್ಟ ಸ್ವಾಗತಿಸಿ, ಪ್ರಕಾಶ್ ಕಟ್ರಬೈಲ್ ವಂದಿಸಿದರು.

LEAVE A REPLY

Please enter your comment!
Please enter your name here