ಕಸಾಪ ಸಮ್ಮೇಳನ: ಸರ್ವಾಧ್ಯಕ್ಷ ಪ್ರೊ.ಎ ಕೃಷ್ಣಪ್ಪ ಪೂಜಾರಿ ಅವರಿಗೆ ಅಧಿಕೃತ ಆಮಂತ್ರಣ

0

ಬೆಳ್ತಂಗಡಿ: ‌ಕಸಾಪ ತಾಲೂಕು ಸಮ್ಮೇಳನ ಡಿ.17 ರಂದು ವಾಣಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದ್ದು ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಎ ಕೃಷ್ಣಪ್ಪ ಪೂಜಾರಿ ಅವರಿಗೆ ಅವರ ನಿವಾಸದಲ್ಲಿ ಡಿ.5 ರಂದು ಅಧಿಕೃತ ಆಮಂತ್ರಣ ನೀಡಲಾಯಿತು.

ಅದಕ್ಕೂ ಮುನ್ನ ಬೆಳ್ತಂಗಡಿಯಲ್ಲಿ ಸಮ್ಮೇಳನದ ಪೂರ್ವಭಾವಿಯಾಗಿ ವಿವಿಧ ಸಮಿತಿಗಳ ಅಂತಿಮ ಸುತ್ತಿನ ಸಮಾಲೋಚನಾ ಸಭೆಯೂ ನಡೆಯಿತು.

ಮುಂದಿನ ಹಂತದಲ್ಲಿ ವಿವಿಧ ಸಮಿತಿಗಳು ಪ್ರ ಪ್ರತ್ಯೇಕ ಸಭೆ ನಡೆಸಿ ಸಮ್ಮೇಳನದ‌ ಯಶಸ್ವಿಗೆ ಕಾರ್ಯಯೋಜನೆ ರೂಪಿಸುವ ಬಗ್ಗೆ ತೀರ್ಮಾನಿಸಲಾಯಿತು.

ಕಾಸಪ ತಾಲೂಕು ಅಧ್ಯಕ್ಷ ಡಿ ಯದುಪತಿ ಗೌಡ, ತಾ. ಗೌರವ ಕಾರ್ಯದರ್ಶಿ ರಾಮಕೃಷ್ಯ ಭಟ್ ಬೆಳಾಲು, ಸಮ್ಮೇಳನ ಸಂಯೋಜನಾ ಸಮಿತಿ ಅಧ್ಯಕ್ಷ ಜಯಾನಂದ ಗೌಡ, ಕಾರ್ಯದರ್ಶಿ ಮೋಹನ ಗೌಡ ಕೊಯ್ಯೂರು, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಲಕ್ಷ್ಮಣ ಪೂಜಾರಿ ಲಾಯಿಲ, ಮಹಾಬಲ ಗೌಡ, ಅಶ್ರಫ್ ಆಲಿಕುಂಞಿ ಮುಂಡಾಜೆ, ಚೈತ್ರೇಶ್ ಇಳಂತಿಲ, ವಿಷ್ಣುಪ್ರಕಾಶ್, ವಸಂತ ಶೆಟ್ಟಿ ಬೆಳ್ತಂಗಡಿ, ಸುಧೀರ್ ಕೆ.ಎನ್ ಇವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here