ದ.ಕ ಫ್ಲವರ್ ಡೆಕೋರೇಟರ್ಸ್ ಮಾಲಕರ ಸಂಘದಿಂದ ಬೆಳಕಿನ ಹಬ್ಬ ದೀಪಾವಳಿ ಆಚರಣೆ- ದೀಪಾವಳಿಯಲ್ಲಿ ಪ್ರಜ್ವಲಿಸಿದ ಸೌಹಾರ್ದ ಸಂಭ್ರಮ

0

ಬೆಳ್ತಂಗಡಿ: ನವಂಬರ್ 13 ರಂದು ದಕ್ಷಿಣ ಕನ್ನಡ ಫ್ಲವರ್ ಡೆಕೋರೇಟರ್ಸ್ ಮಾಲಕರ ಸಂಘದಿಂದ ಮಂಗಳೂರಿನ ಸಂಘದ ಕಚೇರಿಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.ಸಂಘದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮದ ಸದಸ್ಯರು ಒಟ್ಟಾಗಿ ಹಿಂದೂ ಧರ್ಮದ ಸದಸ್ಯರನ್ನು ಆರತಿ ಬೆಳಗಿಸಿ ಸ್ವಾಗತಿಸಿ, ಎಲ್ಲರೂ ಒಟ್ಟಾಗಿ ದೀಪವನ್ನು ಬೆಳಗಿಸಿ, ಹಸಿರು ಪಟಾಕಿಯನ್ನು ಸಿಡಿಸಿ ದೀಪಾವಳಿ ಹಬ್ಬವನ್ನು ಸೌಹಾರ್ದತೆಯ, ಮಧುರತೆಯ, ಬಾಂಧವ್ಯದ ಸೊಬಗಿನೊಂದಿಗೆ ವಿನೂತನ ಶೈಲಿಯಲ್ಲಿ ಆಚರಿಸಲಾಯಿತು.

ಹಲವಾರು ಸಮಾಜಮುಖಿ ಕಾರ್ಯ ವೈಖರಿಯೊಂದಿಗೆ ಉತ್ಸಾಹಿ ಸದಸ್ಯರಿರುವ ಕೇವಲ ಒಂದೇ ವರ್ಷ ಹಿಂದೆ ನೂತನವಾಗಿ ಪ್ರಾರಂಭಗೊಂಡ ಈ ಸಂಘ ಈಗಾಗಲೇ ಕ್ರಿಕೆಟ್ ಪಂದ್ಯಾಟ, ಕಿರು ಪ್ರವಾಸ, ಸ್ವಾತಂತ್ರ್ಯೋತ್ಸವದ ಆಚರಣೆ, ಆಟಿಡೊಂಜಿ ದಿನ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಂಡು ಬಂದಿದ್ದು ಈ ಬಾರಿ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ದೀಪಾವಳಿಯ ವೈಶಿಷ್ಟ್ಯದ ಬಗ್ಗೆ ಲಕ್ಷ್ಮೀನಾರಾಯಣ ರವರು ಹೇಳಿದರು, ಕ್ರಿಶ್ಚಿಯನ್ ಬಾಂಧವರ ಪರವಾಗಿ ಶ್ರೀಯುತ ವಿಲ್ಫ್ರೆಡ್ ರವರು ಶುಭಾಶಯ ಕೋರಿದರು. ಮುಸ್ಲಿಂ ಬಾಂಧವರ ಪರವಾಗಿ ಫಕೀರಬ್ಬರವರು ಸೌಹಾರ್ದತೆಯ ಮಧುರತೆಯನ್ನು ವಿವರಿಸಿದರು.

ಸಂಘದ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ ಹಾಗೂ ಕಾರ್ಯದರ್ಶಿ ಸುಲಕ್ಷಣ್ ರೈ ರವರು ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದರು.ದೀಪಾವಳಿ ಹಬ್ಬವನ್ನು ಎಲ್ಲಾ ಬಾಂಧವರು ಅದ್ದೂರಿಯಾಗಿ ಆಚರಿಸಿ ದೀಪಾವಳಿಯ ಸಿಹಿಯೊಂದಿಗೆ ಸೌಹಾರ್ದತೆಯ ಸವಿಯನ್ನು ಹಂಚಿಕೊಂಡು ಸಂತಸ ಪಟ್ಟರು.

LEAVE A REPLY

Please enter your comment!
Please enter your name here