ಬೆಳ್ತಂಗಡಿ ಶಾಸಕ ಪೂಂಜರ ಕಚೇರಿಗೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿ-ಸನ್ಮಾನ

0

ಬೆಳ್ತಂಗಡಿ: ಮಹಾರಾಷ್ಟ್ರದ ಚುರುಕಿನ ರಾಜಕೀಯ ಮುಖಂಡ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಕಚೇರಿಗೆ ಭೇಟಿಯಾದರು. ಚಿಕ್ಕಮಗಳೂರು ತೆರಳುವ ದಾರಿ ಮಧ್ಯೆ ಶಾಸಕರ ಕಚೇರಿಯಲ್ಲಿ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ಹಲವಾರು ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.


ಈ ವೇಳೆ ಶಾಸಕ ಹರೀಶ್ ಪೂಂಜ ದೇವೇಂದ್ರ ಫಡ್ನವಿಸ್ ಗೆ ಶಾಲು ಹೊದಿಸಿ ಸನ್ಮಾನಿಸಿದ್ರು. ಪ್ರತಾಪ ಸಿಂಹ ನಾಯಕ್ ಹಾರ ಹಾಕಿ ಗೌರವಿಸಿದರೆ, ಜಯಂತ್ ಕೋಟ್ಯಾನ್ ಪೇಟ ತೋಡಿಸಿ ಅಭಿನಂದಿಸಿದರು. ಅಪಾರ ಕಾರ್ಯಕರ್ತರ ಸಮ್ಮುಖದಲ್ಲಿ ಗೌರವ ಸ್ವೀಕರಿಸಿದ ದೇವೇಂದ್ರ ಫಡ್ನವಿಸ್ ಎಲ್ಲರಿಗೂ ಧನ್ಯವಾದ ತಿಳಿಸಿ, ಶಾಸಕರಿಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here