ಉಜಿರೆ ಶ್ರೀ ಧ. ಮ. ಪ. ಪೂ. ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

0


ಉಜಿರೆ :ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ ನಡೆಯಿತು. ಅಗ್ರೀಲೀಫ್ ಎಕ್ಸ್ಪೋರ್ಟ್ ಇದರ ಸ್ಥಾಪಕ ಹಾಗೂ ನಿರ್ದೇಶಕರಾದ ಅತಿಶಯ ಜೈನ್ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕಾರ ನೀಡಿ ಗೌರವಿಸಿದರು.

ಪ್ರಾಚಾರ್ಯ ಪ್ರೊ ದಿನೇಶ ಚೌಟ ಅವರು ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಪರವಾಗಿ ಅತಿಶಯ ಜೈನ್ ಅವರನ್ನು ಪ್ರಾಚಾರ್ಯ ಪ್ರೊ.ದಿನೇಶ ಚೌಟ ಹಾಗೂ ಉಪ ಪ್ರಾಚಾರ್ಯ ಪ್ರಮೋದ್ ಕುಮಾರ್ ಇವರು ಸನ್ಮಾನಿಸಿದರು.

ಉಪನ್ಯಾಸಕರಾದ ಸ್ಮಿತಾ ಬೆಡೇಕರ್ ಹಾಗೂ ವೈದೇಹಿ ಬಹುಮಾನಿತರ ಪಟ್ಟಿಯನ್ನು ವಾಚನ ಮಾಡಿದರು.
ಅನನ್ಯಾ ಸ್ವಾಗತಿಸಿ, ಯಶಸ್ ಮೋಹನ್ ಪರಿಚಯ ಮಾಡಿದರು. ಧರಿತ್ರಿ ಭಿಡೆ ಹಾಗೂ ಶಿವವಿನೀತ್ ನಿರೂಪಿಸಿ, ಪ್ರಣಮ್ಯಾ ಜೈನ್ ವಂದಿಸಿದರು.

LEAVE A REPLY

Please enter your comment!
Please enter your name here