ಬೆಂಗಳೂರಿನಲ್ಲಿ ಬೆಳ್ತಂಗಡಿಯ ಮೀನಿನ ಅಂಗಡಿಗೆ ರೌಡಿ ದಾಳಿ ರಕ್ಷಿತ್ ಶಿವರಾಂ ಖಂಡನೆ

0

ಬೆಂಗಳೂರಿನಲ್ಲಿ ಮೀನಿನ ಅಂಗಡಿ ನಡೆಯುತ್ತಿರುವ ಬೆಳ್ತಂಗಡಿಯ ಸದಾಶಿವ ರವರ ಮೇಲೆ ಹಪ್ತಕ್ಕಾಗಿ ಬೇಡಿಕೆ ಇಟ್ಟು ರೌಡಿಯೊಬ್ಬ ಅಂಗಡಿ ಮಾಲಕರು ಮೇಲೆ ತಲವಾರ್ ಮೂಲಕ ಧಾಳಿ ನಡೆಸಿದ್ದು. ಈ ಘಟನೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಖಂಡಿಸಿದ್ದು.ಮತ್ತು ಈ ಬಗ್ಗೆ ಬಾಣಸವಾಡಿ ಪೋಲಿಸ್ ಠಾಣೆಯ ಅಧಿಕಾರಿಯೊಂದಿಗೆ ಮಾತನಾಡಿ ಮಾಹಿತಿಯನ್ನು ಪಡೆದುಕೊಂಡರು ಅರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು . ಆರೋಪಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸ್ವಂತ ಉದ್ಯೋಗದ ಮೂಲಕ ಹಾಗೂ ಇನ್ನಿತರ ಕೆಲಸ ಕಾರ್ಯಗಳ ಮೂಲಕ ಬೆಂಗಳೂರಿನಲ್ಲಿ ದುಡಿಯುತ್ತಿರುವ ಕರಾವಳಿಯ ಬಂಧುಗಳಿಗೆ ರಕ್ಷಣೆ ನೀಡಬೇಕು ಎಂದು ಬೆಂಗಳೂರು ನಗರ ಪೋಲಿಸ್ ಕಮಿಷನರ್ ಪ್ರತಾಪ್‌ ರೆಡ್ಡಿ ಯವರಿಗೆ ಮನವಿ ಮಾಡಿದರು, ಮತ್ತು ಅಂಗಡಿ ಮಾಲಿಕರಾದ ಸದಾಶಿವ ರವರಿಗೆ ಕರೆ ಮಾಡಿ ಮಾತನಾಡಿ ಧೈರ್ಯವನ್ನು ತುಂಬಿ ಮತ್ತು ತಮ್ಮ ಸಂಪೂರ್ಣ ಸಹಕಾರ ಇರುವುದಾಗಿ ಭರವಸೆ ನೀಡಿದರು.

LEAVE A REPLY

Please enter your comment!
Please enter your name here