





ಬೆಳ್ತಂಗಡಿ: ಅಖಿಲಾ ಭಾರತ ಜೀವವಿಮಾ ಪ್ರತಿನಿಧಿಗಳ ಸಂಘಟನೆಯ (ಎಲೈಸಿಎಒಐ) ದಕ್ಷಿಣ ಮದ್ಯವಲಯದ ಉಪಾಧ್ಯಕ್ಷರಾಗಿ ಧರ್ಮಸ್ಥಳದ ಎ.ಎಸ್. ಲೋಕೇಶ್ ಶೆಟ್ಟಿ ದ್ವಿತೀಯ ಬಾರಿಗೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ತೆಲಂಗಾಣ ರಾಜ್ಯದ ಕಮ್ಮಾಮ್ ಜಿಲ್ಲೆಯಲ್ಲಿ ಜರುಗಿದ ದಕ್ಷಿಣ ಮಧ್ಯವಲಯದ ಮಹಾ ಸಮ್ಮೇಳನದಲ್ಲಿ ಅಖಿಲಾ ಭಾರತ ಜೀವವಿಮಾ ಪತ್ರಿನಿಧಿಗಳ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಕಾಂ। ಸುರ್ಜಿತ್ ಕುಮಾರ್ ಬೋಸ್, ಕಾರ್ಯಾಧ್ಯಕ್ಷ ಕಾಂ॥ ಎಲ್ ಮಂಜುನಾಥ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಂ॥ ಡಾ.ದಿಲೀಪ್, ದಕ್ಷಿಣ ಮಧ್ಯವಲಯದ ಪ್ರಧಾನ ಕಾರ್ಯದರ್ಶಿ ಪಿ.ಎಲ್ ನರಸಿಂಹರಾವ್ ರವರ ಉಪಸ್ಥಿತಿಯಲ್ಲಿ ದ್ವಿತೀಯ ಭಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಲೋಕೇಶ್ ಶೆಟ್ಟಿ ಕರ್ನಾಟಕ ರಾಜ್ಯಸಮಿತಿಯ ಅಧ್ಯಕ್ಷರಾಗಿ ನಿರ್ವಹಿಸಿದ್ದು ಮತ್ತು ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.









