





ಬೆಳ್ತಂಗಡಿ: ಮಂಗಳೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ಕೋಣಾಜೆ ಮೈದಾನದಲ್ಲಿ ಡಿ. 3ರಂದು ನಡೆಯಲಿರುವ ಶ್ರೀ ನಾರಾಯಣ ಗುರುಗಳು ಮತ್ತು ಮಹಾತ್ಮಾ ಗಾಂಧಿಯವರ ಭೇಟಿಯ ಶತಮಾನೋತ್ಸತ್ವದ ಸಂಬ್ರಮಾಚಾರಣೆಯಾದ,
” ಗುರುಗಾಂಧಿ ಸಂವಾದ ಶತಮಾನೋತ್ಸವ” ಕಾರ್ಯಕ್ರಮಕ್ಕೆ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಬಿಷಫ್ ಜೆಮ್ಸ್ ಪಟ್ಟೆರಿಯವರನ್ನು ಮತ್ತು ನಿಕಟಪೂರ್ವ ಬಿಷಪ್ ಲೋರನ್ಸ್ ಮುಕ್ಕುಝಿಯವರನ್ನು ಆಹ್ವಾನಿಸಲು ಶಿವಗಿರಿ ಮಠದ ಜ್ಞಾನತಿರ್ಥ ಸ್ವಾಮಿಜಿ ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನದ ವಿಖ್ಯಾತಾನಂದ ಸ್ವಾಮಿಜಿ, ಯುವ ನಾಯಕ ರಕ್ಷಿತ್ ಶಿವರಾಮ್ ಜೊತೆಯಾಗಿ ಬಂದು ಮಾತುಕತೆ ನಡೆಸಿದರು. ಪ್ರಮುರಾದ
ಸಬಾಸ್ಟಿಯನ್ ಪಿ.ಟಿ.ಕಳೆಂಜ, ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ, ಅನೀಫ್ ಉಜಿರೆ, ಲಕ್ಷ್ಮೀಶ ಗಬಲಡ್ಕ , ರೊಯ್ ಜೋಸೆಫ್ ಪುದುವೆಟ್ಟು, ಮತ್ತಿತರರು ಉಪಸ್ಥಿತರಿದ್ದರು.









