
ಗೇರುಕಟ್ಟೆ: ಸಮೀಪದ ಪೆಟ್ರೋಲ್ ಬಂಕ್ ವೊಂದರಲ್ಲಿ ಪೆಟ್ರೋಲ್ ಡಿಸೇಲ್ ಮಿಕ್ಸ್ ಆಗಿದೆ,ಅದರಿಂದ ಹಲವು ವಾಹನಗಳಿಗೆ ಹಾನಿಯಾಗಿದೆ ಎಂದು ಆರೋಪಿಸಿ ಹಲವಾರು ವಾಹನ ಮಾಲಕರು ಬೆಳ್ತಂಗಡಿ ಪೊಲೀಸ್ ಠಾಣೆಯೆದುರು ಜಮಾಯಿಸಿದ್ದಾರೆ. ಆ ಪೆಟ್ರೋಲ್ ಬಂಕ್ ನಲ್ಲಿ ಇಂದು (ಆ.1) ಇಂಧನ ತುಂಬಿಸಿದ ವಾಹನಗಳು ಅಲ್ಲಲ್ಲಿ ನಿಂತ ಹಿನ್ನಲೆಯಲ್ಲಿ ವಾಹನ ಮಾಲಕರು ಆಕ್ರೋಶ ವ್ಯಕ್ತಪಡಿಸಿ, ಠಾಣೆಯತ್ತ ಜಮಾಯಿಸುತ್ತಿದ್ದಾರೆ.