
ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಗುರುತಿನ ಉತ್ಖನನದಲ್ಲಿ ಏನೂ ಸಿಕ್ಕಿಲ್ಲ ಅನ್ನುವ ಮಾಹಿತಿ ಲಭ್ಯವಾಗಿದೆ. ಜೆಸಿಬಿ ಮೂಲಕ ಉತ್ಖನನಕ್ಕೆ ಅಧಿಕಾರಿಗಳು ನಿರ್ಧರಿಸಿ ನಿರಂತರವಾಗಿ ಮಿನಿ ಜೆಸಿಬಿಯ ಮೂಲಕ ಅಗೆಯಿಸಲಾಗಿದೆ. 15 ಅಡಿ ಅಗಲ, 8 ಅಡಿ ಆಳ ತೋಡಿದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ ಅನ್ನುವ ಮಾಹಿತಿ ಲಭ್ಯವಾಗಿದೆ. ಮೊದಲನೇ ಗುರುತಿನ ಸ್ಥಳದಲ್ಲಿ ಅಗೆಯುವ ಕಾರ್ಯಾಚರಣೆ ಅಂತ್ಯವಾಗಿದೆ.