
ಬೆಳ್ತಂಗಡಿ: ನಕ್ಸಲ್ ಚಳವಳಿಯ ಪ್ರಮುಖ ನಾಯಕ ರೂಪೇಶ್ ಪಿ.ಆರ್. (57)ನನ್ನು ಬೆಳ್ತಂಗಡಿ ಕೋರ್ಟ್ಗೆ ಹಾಜರುಪಡಿಸಿ, ವಿಚಾರಣೆ ನಡೆಸಿ ಮತ್ತೆ ಕೇರಳ ಜೈಲಿನಿ ಕಳುಹಿಸಲಾಗಿದೆ.
ರೂಪೇಶ್ ಪಿ.ಆರ್. ಅವರನ್ನು ಕೇರಳ ಜೈಲಿನಿಂದ ಜು.22ರಂದು ಬಾಡ ವಾರೆಂಟ್ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ 3 ದಿನ ಬೆಳ್ತಂಗಡಿ ಪೊಲೀಸ್ – ಕಸ್ಟಡಿಗೆ ಪಡೆದುಕೊಂಡಿದ್ದರು. 2012ರ ಡಿಸೆಂಬರ್ 10ರ ಗುಂಡಿನ ದಾಳಿ ಪ್ರಕರಣ ನಡೆದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬೊಳ್ಳೆ ಪ್ರದೇಶದಲ್ಲಿ ಮಹಜರು ನಡೆಸಿ ತನಿಖೆ ನಡೆಸಿದ್ದರು. ಜು.24ರಂದು ಕೇರಳ ಜೈಲಿಗೆ ಕರೆದೊಯ್ಯಲಾಗಿದೆ. ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಬಿಗಿ ಭದ್ರತೆಯೊಂದಿಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಕೇರಳ ಜೈಲಿಗೆ ಕರೆದೊಯ್ಯಲಾಗಿದೆ.