ಪಡ್ಡಂದಡ್ಕ ಮದರಸದಲ್ಲಿ ರಕ್ಷಕರ ಸಭೆ

0

ವೇಣೂರು: ಪಡ್ಡ೦ದಡ್ಕ ನುರುಲ್ ಹುಧಾ ಮಸೀದಿ ಆದೀನದಲ್ಲಿರುವ ಮುನವಿರುಲ್ ಇಸ್ಲಾಂ ಮದರಸದ ರಕ್ಷಕರ ಸಭೆ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಅಧ್ಯಕ್ಷತೆಯಲ್ಲಿ ಮದರಸ ಸಭಾಂಗಣದಲ್ಲಿ ಜೂ.29ರಂದು ನಡೆಯಿತು.

ಖತೀಬ್ ಜನಾಬ್ ಕಲಂದರ್ ಶಾಫಿ ಬಾಖವಿ ಅಲ್ ಮನ್ನಾನಿ ದುವಾ ಮಾಡಿ ಉದ್ಘಾಟಿಸಿದರು. ಸಭೆಯಲ್ಲಿ ಅಧ್ಯಾಪಕರು ಹೆತ್ತವರು ಕುಂದು ಕೊರತೆಗಳ ಬಗ್ಗೆ ಮತ್ತು ಮದರಸ ಮಕ್ಕಳ ವಿದ್ಯಾರ್ಜನೆ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಪ್ರಧಾನ ಕಾರ್ಯದರ್ಶಿ ರಫೀಕ್ ಪಡ್ಡ, ಸದರ್ ಉಸ್ತಾದ್ ಝುಬೇರ್ ಅಜ್ಹರಿ, ಮಹಲ್ಲಿಂ, ಮೊಹಝಿನ್, ಸದಸ್ಯರುಗಳಾದ ಇದ್ರಿಸ್ ಪುಲಾಬೆ, ಅಶ್ರಫ್ ಕಿರೋಡಿ, ಪತ್ರಕರ್ತ ಮೊಹಮ್ಮದ್ ಎಚ್. ವೇಣೂರು, ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here