ಹೊಸಂಗಡಿ: ಪರಿಸರ ಮಾಹಿತಿ-ಗಿಡ ನಾಟಿ ಕಾರ್ಯಕ್ರಮ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕೆರೆ ಹಾಗೂ ಸ. ಹಿ. ಪ್ರಾ. ಶಾಲೆ ಕಾಶೀಪಟ್ಣ ಇವರ ಸಹಕಾರದೊಂದಿಗೆ ಗಿಡ ನಾಟಿ ಕಾರ್ಯಕ್ರಮ ನಡೆಯಿತು.
ಜನಜಾಗೃತಿ ವೇದಿಕೆ ವಲಯಧ್ಯಕ್ಷ ಸುಬ್ಬಣ್ಣ ಪೂಜಾರಿ ಗಿಡನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಜನೆಯಿಂದ ರಾಜ್ಯಾಧ್ಯಂತ ಪರಿಸರ ಜಾಗ್ರತಿ ಹಾಗೂ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ಪ್ರಾಣಿ ಪಕ್ಷಿ ಗಳಿಗೆ ಎಲ್ಲಾ ಸಮಯದಲ್ಲಿ ಆಹಾರ ಸಿಗುವಂತೆ ಹೆಚ್ಚು ಹೆಚ್ಚು ಹಣ್ಣಿನ ಗಿಡವನ್ನು ನಾಟಿ ಮಾಡುತ್ತಿದ್ದು ಪ್ರಾಣಿ ಪಕ್ಷಿ ಗಳಿಗೆ ಅನುಕೊಲವಾಗುತ್ತದೆ ಅದನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಗಿಡ ನಾಟಿ ಕಾರ್ಯಕ್ರಮವನ್ನು ಶಾಲೆ ಎಸ್‌.ಡಿ.ಎಂ.ಸಿ ಅಧ್ಯಕ್ಷ ವಿದ್ಯಾನಂದ ಪೂಜಾರಿ ಅವರು ಹಣ್ಣಿನ ಗಿಡ ನಾಟಿ ಮಾಡುವ ಮುಖಾಂತರ ಚಾಲನೆ ನೀಡಿ ಪರಿಸರ ನಾಶದಿಂದ ಮನುಕುಲಕ್ಕೆ ಆಗುವ ತೊಂದರೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕಿ ವೀಣಾ, ಒಕ್ಕೂಟ ಅಧ್ಯಕ್ಷ ಸಂಜೀವ, ಜಯಂತಿ, ಕಾಂತಪ್ಪ ಪೂಜಾರಿ, ಕಾರ್ಯಕ್ರಮದಲ್ಲಿ ವಿಪತ್ತು ನಿರ್ವಹಣಾ ಘಟಕ ಸದಸ್ಯರು ಗಿಡ ನಾಟಿ ಮಾಡುವ ಮೂಲಕ ಶ್ರಮದಾನದಲ್ಲಿ ಭಾಗವಹಿಸಿದರು. ಒಕ್ಕೂಟದ ಉಪಾಧ್ಯಕ್ಷರು, ವಸೂದ ಸೇವಾಪ್ರತಿನಿಧಿ ಶಶಿಕಲಾ ಹಾಗೂ ಮಮತಾ ಹಾಗೂ ಶಾಲಾ ಶಿಕ್ಷಕ ವೃದ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here