ಎಲ್.ಐ.ಸಿ. ಉನ್ನತ ಶ್ರೇಣಿ ಸಹಾಯಕ ರಘುಚಂದ್ರ ಟಿ. ಜಿ.ಯವರಿಗೆ ಬೀಳ್ಕೊಡುಗೆ

0

ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯಲ್ಲಿ ಉನ್ನತ ಶ್ರೇಣಿ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜೂ. 30ರಂದು ಸೇವಾ ನಿವೃತ್ತಿ ಹೊಂದು ತ್ತಿರುವ ಧರ್ಮಸ್ಥಳ ಆಜುಕುರಿ ನಿವಾಸಿ ರಘುಚಂದ್ರ ಟಿ. ಜಿ. ಯವರಿಗೆ ಜೂ. 28ರಂದು ಭಾರತೀಯ ಜೀವ ವಿಮಾ ನಿಗಮ ಕ್ರೀಡಾ ಮತ್ತು ಮನೋರಂಜನಾ ಸಂಘದವತಿಯಿಂದ ಬೀಳ್ಕೊಡುಗೆ ಸಮಾರಂಭ ಜರಗಿತು.

ಜೀವ ವಿಮಾ ನಿಗಮದಲ್ಲಿ 1991ರಿಂದ ದಾವಣಗೆರೆ, ಸಕಲೇಶಪುರ, ಕಾರ್ಕಳ, ಬಂಟ್ವಾಳ ಶಾಖೆಗಳಲ್ಲಿ ಸುಧೀರ್ಘ 34 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಇವರನ್ನು ವಿಮಾ ನಿಗಮದ ಕ್ರೀಡಾ ಮತ್ತು ಮನೋರಂಜನಾ ಸಂಘ, ಬಂಟ್ವಾಳ ಮತ್ತು ಬೆಳ್ತಂಗಡಿ ವಿಮಾ ಪ್ರತಿನಿಧಿಗಳು, ಸಿಬ್ಬಂದಿಗಳು, ಹಿತೈಷಿಗಳು ಶುಭ ಹಾರೈಸಿ ಗೌರವಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಖೆಯ ಸೀನಿಯರ್ ಮೆನೇಜರ್ ಸತೀಶ್ ಕುಮಾರ್ ವಹಿಸಿದ್ದರು, ಮುಖ್ಯ ಅತಿಥಿ ಗಳಾಗಿ ನಿವೃತ್ತ ಸೀನಿಯರ್ ಮೆನೇಜರ್ ನಾರಾಯಣ ಗೌಡ, ಬಂಟ್ವಾಳ ಶಾಖೆಯ ಹಿರಿಯ ಶಾಖಾ ಧಿಕಾರಿ ಗುರುದತ್ತ ನಾಯಕ್, ಕ್ರೀಡಾ ಮತ್ತು ಮನೋರಂಜನಾ ಸಂಘದ ಕಾರ್ಯದರ್ಶಿ ಲೋಕೇಶ್ ಭಾಗವಹಿಸಿದ್ದರು.

ರಘುಚಂದ್ರರ ಪತ್ನಿ ಉಷಾ, ಪುತ್ರ ಶಿಶಿರ್ ರಘುಚಂದ್ರ, ಕುಟುಂಬಸ್ಥರು ಹಿತೈಷಿ ಗಳು ಹಾಜರಿದ್ದರು. ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಸ್ವಾಗತಿಸಿ, ದಿನೇಶ್ ಮತ್ತು ಧರಣೇಂದ್ರ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮನೋರಂಜನಾ ಕಾರ್ಯಕ್ರಮ ಜರಗಿತು.ಬಂಟ್ವಾಳ ಶಾಖೆಯ ಉಪ ಶಾಖಾಧಿಕಾರಿ ಕೃಪಾಲ್ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here